ಪೆರ್ಲ: ಇಲ್ಲಿನ ಕಾಟುಕುಕ್ಕೆ ಅರೆಕ್ಕಾಡಿ ನಿವಾಸಿ ಜಯೇಶ್(35) ನಾಪತ್ತೆಯಾಗಿರುವ ಘಟನೆ ನಡೆದಿದೆ.
ಜೂನ್ 9 ರಂದು 11 ಗಂಟೆಗೆ ಸಹೋದರಿಯ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟಿದ್ದು ಅನಂತರ ಹಿಂತಿರುಗಿರಲಿಲ್ಲ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಈ ಹಿಂದೆ ಸುಳ್ಯದ ಬಾರ್ ಒಂದರಲ್ಲಿ ಉದ್ಯೋಗಿಯಾಗಿರುವ ಜಿತೇಶ್, ಇದೀಗ ಉದ್ಯೋಗ ತ್ಯಜಿಸಿ ಮನೆಯಲ್ಲೇ ಇದ್ದರೆನ್ನಲಾಗಿದೆ.
ನಾಪತ್ತೆಯಾದ ದಿನ ಸಾಯಂಕಾಲ ತಾನು ಪೆರ್ಲ ಪೇಟೆಯಲ್ಲಿ ಇರುವುದಾಗಿಯೂ ಕೂಡಲೇ ಮನೆಗೆ ಬರುವುದಾಗಿಯೂ ಹೇಳಿದ್ದರು. ಅನಂತರ ಮೊಬೈಲು ಪೋನ್ ಸ್ವಿಚ್ ಆಫ್ ಆಗಿತ್ತು.
ಈ ಬಗ್ಗೆ ಸಹೋದರ ರಾಜೇಶ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.