ಉಪ್ಪಿನಂಗಡಿ : ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆಯಲ್ಲಿ ನೆಲ್ಯಾಡಿ ಕಡೆಯಿಂದ ಮರಳು ಕದ್ದು ಸಾಗಾಟ ಮಾಡುತ್ತಿದ್ದ ಫಿಕಫ್ ವಾಹನ ಸಹಿತ ಚಾಲಕನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
34 ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ಪೊಲೀಸರು ವಾಹನ ತಪಾಸಣೆ ಮಾಡಿಕೊಂಡ ವೇಳೆ ಈ ಪ್ರಕರಣ ಪತ್ತೆಯಾಗಿದೆ. ನೆಲ್ಯಾಡಿಯಿಂದ ಬರುತಿದ್ದ ಫಿಕಪ್ ಅನ್ನು ನಿಲ್ಲಿಸಿ ವಿಚಾರಿಸಿದಾಗ ಮರಳು ತುಂಬಿರುವುದು ಕಂಡು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಮರಳನ್ನು ಸುಕ್ರಿಯಾ ಟ್ರೆಡಿಂಗ್ ಸೆಂಟರ್ ಮಾಲಕ ಮಹಮ್ಮದ್ ಅಶ್ರಫ್ ಯಾವುದೇ ಅನುಮತಿ ಅಥವಾ ಪರವಾನಿಗೆಯನ್ನು ಹೊಂದದೇ ಅವರ ಅಂಗಡಿಯ ಬಳಿ ರಾಶಿ ಹಾಕಿದ್ದು ಅಲ್ಲಿಂದ ವಾಹನದಲ್ಲಿ ತುಂಬಿಸಿ ಪೆರ್ನೆ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಹೇಳಿದ್ದಾನೆ. ಎಲ್ಲಿಂದಲೋ ಮರಳನ್ನು ಕಳವು ಮಾಡಿಕೊಂಡು ಅಂಗಡಿಯ ಬಳಿ ರಾಶಿಹಾಕಿ ಗಿರಾಕಿಗಳಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದು ಕಂಡು ಬಂದ ಕಾರಣ ವಾಹನ ಚಾಲಕ ನೆಕ್ಕಿಲಾಡಿಯ ಬೊಳ್ಖಾರುವನಿವಾಸಿ ಅಬ್ದುಲ್ ಖಾದರ್ ವಿರುದ್ಧ ಪ್ರಕರಣ ದಾಖಲಾಗಿದೆ
ಪಿಕಫ್ ವಾಹನದಲ್ಲಿ 50 ಪ್ಲಾಸ್ಟಿಕ್ ಬುಟ್ಟಿ ಮರಳು ಇದ್ದು ಅಂದಾಜು ಮೌಲ್ಯ ರೂ 2,500 ರೂ., ಮರಳು ಸಾಗಾಟಕ್ಕೆ ಬಳಸಿದ ಪಿಕಫ್ ವಾಹನದ ಮೌಲ್ಯ ರೂ 4,50,000 ಎಂದು ಅಂದಾಜಿಸಲಾಗಿದೆ.