ಪುತ್ತೂರು: ನಾಥ ಪಂಥೀಯ ಜೋಗಿ ಸಮಾಜ ಸುಧಾರಕ ಸಂಘ ಪುತ್ತೂರು ಘಟಕದ ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜುಲೈ 20 ರಂದು ಮುಗೇರಡ್ಕ ಶ್ರೀಮತಿ ಸುಶೀಲ ಜಯರಾಮ ಪುರುಷ ಇವರ ಜಯಶೀಲ ನಿಲಯದ ಎದುರಿನ ಗದ್ದೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜೂ.22 ರಂದು ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ನವೀನ್ ಡಿ ದೋಳ್ತಟ್ಟ, ಉಪಾಧ್ಯಕ್ಷರಾದ ಆನಂದ ಮಣಿಯ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಪುರುಷ, ಸಂಚಾಲಕರಾದ ದಯಾನಂದ ಪುತ್ತೂರಮೂಲೆ, ಖಾಜಾಂಜಿ ಜಗನ್ನಾಥ್ ನೆಲ್ಲಿಕಟ್ಟೆ, ಕ್ರೀಡಾ ಕಾರ್ಯದರ್ಶಿ ಭವಿತ್ ನಡುಗುಡ್ಡೆ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.