ಯುವವಾಹಿನಿ (ರಿ.) ವಿಟ್ಲ ಮತ್ತು ಬಿಲ್ಲವ ಸಂಘ (ರಿ.) ವಿಟ್ಲ ಹಾಗೂ ಮಹಿಳಾ ಘಟಕ ವಿಟ್ಲ ಇದರ ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರ ಜೂನ್ 29 ರಂದು ವಿಟ್ಲದ ಶಿವಗಿರಿ ಪೊನ್ನೊಟ್ಟು ಬಳಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ.
ಬಿಲ್ಲವ ಸಂಘ (ರಿ.) ವಿಟ್ಲದ ಅಧ್ಯಕ್ಷರಾದ ಮಾದವ ಪೂಜಾರಿ ಪಟ್ಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಯುವವಾಹಿನಿ (ರಿ.) ವಿಟ್ಲ ಇದರ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಥಮ ಉಪಾಧ್ಯಕ್ಷರಾದ ಅಶೋಕ್ ಪೂಜಾರಿ ಪಡ್ಪು, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇಜಪ್ಪಪೂಜಾರಿ ನಿಡ್ಯ, ವೀರಕಂಭ ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ಪೂಜಾರಿ ಕೆಲಿಂಜ, ಯುವವಾಹಿನಿ ರಿ. ವಿಟ್ಲದ ಸ್ಥಾಪಕಾಧ್ಯಕ್ಷ ಯಶವಂತ ಪೂಜಾರಿ ನಿಡ್ಯ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಅಮೈ, ಮಹಿಳಾ ಬಿಲ್ಲವ ಸಂಘ ವಿಟ್ಲದ ಅಧ್ಯಕ್ಷೆ ಮಮತಾ ಸಂಜೀವ ಪೂಜಾರಿ ಭಾಗವಹಿಸಲಿದ್ದಾರೆ.