ಪುತ್ತೂರು ನಗರ ಠಾಣಾ ಅಕ್ರ 135/2017 ಕಲಂ 379, 420 ಐಪಿಸಿ ಪ್ರಕರಣದಲ್ಲಿ ಸುಮಾರು 05 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿಯಾದ ಔರಾನ್ @ ರಿಯಾಜ್ (33) ಬೇಲೂರು, ಹಾಸನ ಜಿಲ್ಲೆ,ಎಂಬುವವನನ್ನು ದಿನಾಂಕ 24/07/2025 ರಂದು ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ರವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಸಿ ಹೆಚ್ ಸಿ 685 ಪ್ರಶಾಂತ್ ರೈ, ಸಿಪಿಸಿ 2283 ಶ್ರೀಶೈಲ ಎಂ.ಕೆ, ಸಿಪಿಸಿ 2404 ಮಹಮ್ಮದ್ ಮೌಲಾನಾ ರವರು ಹಾಸನ ಜಿಲ್ಲೆಯ ಬೇಲೂರು ಎಂಬಲ್ಲಿ ಪತ್ತೆಹಚ್ಚಿ ಆರೊಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿದೆ.