ಪುತ್ತೂರು: ಕಡಬ ಗ್ರಾಮ ಪಂಚಾಯತ್ ಮೇಲ್ದರ್ಜೆಗೊಂಡು, ಹೊಸತಾಗಿ ಪಟ್ಟಣ ಪಂಚಾಯತ್ ಆಗಿ ಮಾರ್ಪಟ್ಟ,ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ದಂತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ವೀಕ್ಷಕರನ್ನು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್. ಕೆ ರವರು ನೇಮಕಗೊಳಿಸಿ ಆದೇಶಿಸಿರುತ್ತಾರೆ ಎಂದು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿರುತ್ತಾರೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಚುನಾವಣಾ ವೀಕ್ಷಕರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮೊಹಮ್ಮದ್, ಶ್ರೀ ಸುಭಾಷ್ ಚಂದ್ರ ಶೆಟ್ಟಿ ಕುಲಾಲು, ಮಾಜಿ ಮೇಯರ್ ಶ್ರೀ ಮಹಾಬಲ ಮಾರ್ಲ ಮತ್ತು ಶ್ರೀ ಲಾರೆನ್ಸ್ ಡಿಸೋಜ ರನ್ನು ನೇಮಕಗೊಳಿಸಲಾಗಿದೆ.
ಕಡಬ ಪಟ್ಟಣ ಪಂಚಾಯತ್ ವಾರ್ಡ್ ವಿಕ್ಷಕರನ್ನಾಗಿ ಶ್ರೀ ಮೊಹಮ್ಮದ್ ಮೋನು ಪಾವೂರ್, ಎಮ್.ಬಿ.ವಿಶ್ವನಾಥ್ ರೈ ಪುತ್ತೂರು,ಶ್ರೀ ಉಲ್ಲಾಸ್ ಕೋಟ್ಯಾನ್, ಶ್ರೀ ಟಿ ಕೆ ಸುಧೀರ್, ಶ್ರೀ ಮ್ಯಾಥ್ಯು, ಶ್ರೀ ಸದಾಶಿವ ಉಳ್ಳಾಲ್, ಶ್ರೀ ಚಿತ್ತ ರಂಜನ್ ಶೆಟ್ಟಿ ಬೊಂಡಲ, ಶ್ರೀ ಕಿರಣ್ ಕುಮಾರ್ ಬುಡ್ಲೆ ಗುತ್ತು, ಶ್ರೀ ಇಬ್ರಾಹಿಂ ನವಾಜ್, ಶ್ರೀ ನವೀನ್ ಆರ್ ಡಿಸೋಜಾ, ಡಾಕ್ಟರ್ ರಾಜಾರಾಮ್ ಕೆಬಿ, ಶ್ರೀ ಗಿರೀಶ್ ಶೆಟ್ಟಿ ಕದ್ರಿ, ಶ್ರೀ ಯುಟಿ ತೌಸಿಫ್, ಶ್ರೀ ವಿಕಾಸ್ ಶೆಟ್ಟಿ, ಶ್ರೀಮತಿ ಮಮತಾ ಗಟ್ಟಿ, ಶ್ರೀಮತಿ ಸಬಿತ ಮಿಸ್ಕಿತ್, ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ, ಶ್ರೀ ಪ್ರೇಮ್ ಬಲ್ಲಾಳಬಾಗ್, ಶ್ರೀ ಶುಭೋದಯ ಆಳ್ವ, ಶ್ರೀಮತಿ ಶಾಲೆಟ್ ಪಿಂಟೊ, ಶ್ರೀಮತಿ ಶಾಂತಲಾ ಗಟ್ಟಿ, ಶ್ರೀಮತಿ ಅಪ್ಪಿ ಲತಾ ಕೆ, ಶ್ರೀ ದಿನೇಶ್ ಮೂಳುರ್ ಮತ್ತು ಶ್ರೀ ನಾರಾಯಣ ನಾಯ್ಕ್ ಇವರುಗಳನ್ನು ಕಡಬ ಪಟ್ಟಣ ಪಂಚಾಯತಿನ ವಿವಿಧ 13 ವಾರ್ಡ್ ಗಳಿಗೆ ವೀಕ್ಷಕರುಗಳನ್ನಾಗಿ ನೇಮಕಗೊಳಿಸಲಾಗಿದೆ.
ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ನಾಮಪತ್ರ ಸಲ್ಲಿಕೆಯು ಜುಲೈ 29 ರಿಂದ ಆಗಸ್ಟ್ ಐದರವರೆಗೆ ನಡೆಯಲಿದ್ದು, ಆಗಸ್ಟ್ 6ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಆಗಸ್ಟ್ 8ರಂದು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಕೊನೆ ದಿನವಾಗಿರುತ್ತದೆ. ಕಡಬ ತಾಲ್ಲೂಕು ಘೋಷಣೆಗೊಂದ ನಂತರ, ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ಕಡಬ, ಪಟ್ಟಣ ಪಂಚಾಯಿತಿಗೆ ನಡೆಯುವ ಪ್ರಪ್ರಥಮ ಚುನಾವಣೆ ಇದಾಗಿರುತ್ತದೆ. ಈ ಚುನಾವಣೆಯನ್ನು ಎಲ್ಲಾ ರಾಜಕೀಯ ಪಕ್ಷದವರು ಪ್ರತಿಷ್ಠೆಯಾಗಿ ಪರಿಗಣಿಸಿರುತ್ತಾರೆ.