ಪುತ್ತೂರು ನಗರ ಸಭಾ ವ್ಯಾಪ್ತಿಯ ದರ್ಬೆ ಧನ್ವಂತರಿ ಆಸ್ಪತ್ರೆ ಬಳಿ ರಸ್ತೆ ರಿಪೇರಿ ಕಾಮಗಾರಿ ನಡೆಯುತ್ತಿರುವುದರಿಂದ ಸದ್ರಿ ರಸ್ತೆಯಲ್ಲಿದರ್ಬೆ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಸಂಚರಿಸಲು ಎಲ್ಲ ವಾಹನಗಳಿಗೆ ಅವಕಾಶವಿದ್ದು, ಗಾಂಧಿ ಕಟ್ಟೆ ಕಡೆಯಿಂದ ದರ್ಬೆ ಕಡೆಗೆ ಸಂಚರಿಸುವ ಬಸ್ಗಳು ಹಾಗೂ ಇತರ ಘನ ವಾಹನಗಳು ಬದಲಿ ರಸ್ತೆಯಾಗಿ ಬೊಳುವಾರು-ಲಿನೇಟ್ ಜಂಕ್ಷನ್–ಅಶ್ವಿನಿ ಸರ್ಕಲ್ (ಪತ್ರಾವೋ ಸರ್ಕಲ್) ಮೂಲಕ ಕಾಮಗಾರಿ ಮುಗಿಯುವರೆಗೆ ಸಂಚರಿಸಲು ಪುತ್ತೂರು ನಗರ ಸಂಚಾರಿ ಠಾಣಾ ಪೊಲೀಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.