79 ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ವಿಟ್ಲ
ಗ್ರಾಮೀಣ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ಶ್ರೀಯುತ ಶ್ರೀಪ್ರಕಾಶ್ ಕುಕ್ಕಿಲ ಇವರು ನೆರವೇರಿಸಿ, ದೇಶಾಭಿಮಾನ ಮತ್ತು ಆರ್ಥಿಕ ಸ್ವಾತಂತ್ರ ಬಗ್ಗೆ
ಮಾತನಾಡಿ ಸ್ಫೂರ್ತಿ ತುಂಬಿದರು.
ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ
ಶ್ರೀ ಜಗನ್ನಾಥ ಸಾಲಿಯಾನ್.ಹೆಚ್,ಉಪಾಧ್ಯಕ್ಷರಾದ ಶ್ರೀ ಮನೋರಂಜನ್ ಕೆ. ಆರ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಜಯಂತಿ ಯಚ್ ರಾವ್, ಶ್ರೀಮತಿ ಶುಭಲಕ್ಷ್ಮಿ , ಶ್ರೀ ದಯಾನಂದ ಆಳ್ವ ಕೆ, ಶ್ರೀ ಪೂವಪ್ಪ ಎಸ್, ಶ್ರೀ
ದಿವಾಕರ ವಿ, ಶ್ರೀ ಕೇಶವ ಎ, ಶ್ರೀ ಗೋವರ್ಧನ್ ಕುಮಾರ್ ಐ, ಶ್ರೀ ಭಾಸ್ಕರ್ ಶೆಟ್ಟಿ , ಶ್ರೀ ರಾಮದಾಸ ಶೆಣೈ, ಶ್ರೀ ಮೋಹನ್ ಕೆ ಎಸ್ ಹಾಗೂ ಶ್ರೀ ಸತೀಶ್ ಪಿ ಹಾಗೂ ಅತಿಥಿಗಳಾಗಿ ಶ್ರೀ ತುಳಸಿದಾಸ್ ಶೆಣೈ ಇವರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೃಷ್ಣ ಮುರಳಿ ಶ್ಯಾಮ್. ಕೆ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ
ಯೋಧರಾದ ಶ್ರೀಯುತ ಶ್ರೀಪ್ರಕಾಶ್ ಕುಕ್ಕಿಲ ಹಾಗೂ ಶ್ರೀ ತುಳಸಿದಾಸ್ ಶೆಣೈ ಇವರನ್ನು ಬ್ಯಾಂಕಿನ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬ್ಯಾಂಕಿನ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶ್ರೀ ಚಂದ್ರಹಾಸ ರಾಣ್ಯ ಡಿ
ಇವರು ಕಾರ್ಯಕ್ರಮ ನಿರೂಪಿಸಿದರು.