ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ. ಸೆಪ್ಟೆಂಬರ್ 17ನೇ ಬುಧವಾರ ಸ್ವರ ಕುಡ್ಲ ಸೀಸನ್ 7 ಗ್ರಾಂಡ್ ಫಿನಾಲೆ ಮತ್ತು ವಾರ್ಷಿಕೋತ್ಸವ.
2007ರಲ್ಲಿ ಅಸ್ತಿತ್ವಕ್ಕೆ ಬಂದ ಈ ನಮ್ಮ ಸಂಘಟನೆಯು ಗಾಯಕರು ಹಾಗೂ ಹಿನ್ನೆಲೆ ವಾದಕರು ಸೇರಿ ಸುಮಾರು 350ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ನೋಂದಾಯಿತ ಸಂಸ್ಥೆಯಾಗಿದೆ. ಸಂಗೀತ ಕಲಾ ಕ್ಷೇತ್ರದ ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು, ಕಲಾ ಸಾಧಕರಿಗೆ ಪ್ರಶಸ್ತಿ ಪ್ರಧಾನ, ಯುವ ಪ್ರತಿಭೆಗೆ ಅಭಿನಂದನಾ ಪುರಸ್ಕಾರ ಮತ್ತು ಸಂಗೀತ ಪ್ರತಿಭಾನ್ವೇಷಣೆ ಮುಂತಾದ ಧ್ಯೇಯಗಳಲ್ಲಿ ಮುನ್ನಡೆದು ಮತ್ತಷ್ಟು ಸಾಮಾಜಿಕ ಕಳಕಳಿಯಿಂದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಇವುಗಳ ಮೂಲಕ ಕರಾವಳಿಯ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮ ಗುರಿ ಮತ್ತು ಧ್ಯೇಯವಾಗಿರುತ್ತದೆ.
ಇದೀಗ 18ನೇ ವಾರ್ಷಿಕ ಸಮಾರಂಭದ ಪ್ರಯುಕ್ತ ಸೆಪ್ಟೆಂಬರ್ 17 ಮಧ್ಯಾಹ್ನ 2. 00 ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸ್ವರ ಕುಡ್ಲ ಗ್ರಾಂಡ್ ಫಿನಾಲೆ ಹಾಗೂ ವಾರ್ಷಿಕ ಸಮಾರಂಭ, ಪ್ರಶಸ್ತಿ ಪ್ರಧಾನ, ಅಭಿನಂದನಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮ ಜರಗಲಿದೆ. ಅಂದಿನ ಸಭೆಯ ಉದ್ಘಾಟನೆಯನ್ನು ಹೇರಂಭಾ ಇಂಡಸ್ಟ್ರೀಸ್ ಮುಂಬೈ ಇದರ ಅಧ್ಯಕ್ಷರಾದ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ನಡೆಸಿಕೊಡಲಿದ್ದಾರೆ . ಸಭೆಯ ಅಧ್ಯಕ್ಷತೆಯನ್ನು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೇಶವ ಕನಿಲ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀ ಶಶಿಧರ ಶೆಟ್ಟಿ ಉದ್ಯಮಿ ಗುಜರಾತ್ ಬರೋಡ, ಶ್ರೀ ಮಹೇಶ್ ಕುಮಾರ್ ಡಿ.ವೈ.ಎಸ್. ಪಿ. ವಿರಾಜ್ ಪೇಟೆ, ಶ್ರೀ ವಾಲ್ಟ ರ್ ನಂದಳಿಕೆ ಸ್ಥಾಪಕರು ದೈಜಿ ವರ್ಲ್ಡ್ ಸಮೂಹ ಸಂಸ್ಥೆ, ಶ್ರೀ ಲಾರೆನ್ಸ್ ಡಿಸೋಜಾ ನಿರ್ದೇಶಕರು ದೈಜಿ ವರ್ಲ್ಡ್ ಸಮೂಹ ಸಂಸ್ಥೆ, ಶ್ರೀ ಸಿ. ಎ. ಎಸ್. ಎಸ್. ನಾಯಕ್ ನಿರ್ದೇಶಕರು ಹಾಗೂ ನಿರೂಪಕರು ನಮ್ಮ ಕುಡ್ಲ, ಶ್ರೀ ಮೊಹಮ್ಮದ್ ಅಯಾಜ್ ರೈಟ್ ಚಾಯ್ಸ್ ಇಂಡಸ್ಟ್ರಿಯಲ್ ಅಲ್- ಜುಬೈಲ್ ಕೆ. ಎಸ್. ಎ., ಶ್ರೀ ಚಂದ್ರಶೇಖರ್ ಶೆಟ್ಟಿ ಕುಕ್ಕುಂದೂರ್ ವಚನ ಹಾಸ್ಪಿಟಾಲಿಟಿ ಮುಂಬೈ, ಶ್ರೀ ನಾಗೇಂದ್ರ ಬಾಳಿಗ ಉದ್ಯಮಿ ವಿ. ಏನ್. ಆರ್. ಗೋಲ್ಡ್ ಬಂಟ್ವಾಳ, ಸತೀಶ್ ಕುಮಾರ್ ಬಜಾಲ್ ಅಧ್ಯಕ್ಷರು ಸೌದಿ ಬಿಲ್ಲವಾಸ್ ದಮ್ಮಾಮ್ ಸೌದಿ ಅರೇಬಿಯಾ, ಶ್ರೀ ಮಾಧವ ಬಿ.ಎಂ. ಅಧ್ಯಕ್ಷರು ಭಗವತಿ ಸಹಕಾರ ಬ್ಯಾಂಕ್ ನಿಯಮಿತ ಮಂಗಳೂರು, ಶ್ರೀ ಕೆ ಆರ್ ಜಯಾನಂದ ಅಧ್ಯಕ್ಷರು ಕೇರಳ ತುಳು ಅಕಾಡೆಮಿ, ಶ್ರೀ ಜಗದೀಶ್ ಶೆಟ್ಟಿ ಬೋಳೂರು ನಿರ್ದೇಶಕರು ಸಾನಿಧ್ಯ ರೆಸಿಡೆನ್ಸಿಯಲ್ ಸ್ಕೂಲ್ ಶಕ್ತಿನಗರ, ಶ್ರೀ ಗಿರೀಶ್ ಆಳ್ವ ಮೊರ್ಲಾ ತೌಡಗೋಳಿ ಉದ್ಯಮಿ, ಶ್ರೀ ಪ್ರಶಾಂತ್ ಲಕ್ಷ್ಮಣ್ ನಾಯಕ್ ರೀಜನಲ್ ಮ್ಯಾನೇಜರ್ ಮುತ್ತೂಟ್ ಫೈನಾನ್ಸ್, ತುಳುನಾಡ ಕುಸಲ್ದರಸೆ ದೀಪಕ್ ರೈ ಪಾಣಾಜೆ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಭಾಗವಹಿಸಲಿದ್ದಾರೆ.
ಸಂಗೀತ ಕ್ಷೇತ್ರದ ಹಿರಿಯ ಕಲಾ ಸಾಧಕರಾದ ಶ್ರೀ ತೊನ್ಸೆ ಪುಷ್ಕಳ ಕುಮಾರ್, ಶ್ರೀ ಹನೀಫ್ ಪರ್ಲಿಯಾ, ಶ್ರೀ ಐವನ್ ಸೀಕ್ವೇರಾ ಇವರಿಗೆ “ಕರಾವಳಿ ಸಂಗೀತ ಕಲಾರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಸ್ವರ ಕುಡ್ಲ ಗ್ರ್ಯಾಂಡ್ ಫಿನಾಲೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಂಗೀತ ರಸಮಂಜರಿ ಈ ಎಲ್ಲಾ ಕಾರ್ಯಕ್ರಮಕ್ಕೂ ಸೂಕ್ತ ಸಮಯದಲ್ಲಿ ಕಲಾಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಈ ಮೂಲಕ ಕೋರಲಾಗಿದೆ.
ಸ್ವರ ಕುಡ್ಲ ಸೀಸನ್ 7 ಗ್ರಾಂಡ್ ಫಿನಾಲೆ ಇದರ ಪೂರ್ವ ಬಾವಿಯಾಗಿ ಸ್ವರ ಕಡ್ಲಾ ಆಡಿಷನ್ ಮತ್ತು ಸೆಮಿ ಫೈನಲ್ ರೌಂಡ್ಸ್ ನಗರದ ಬಿ ಇ ಎಂ ಹೈಸ್ಕೂಲ್ ಕಾರ್ ಸ್ಟ್ರೀಟ್ ಮಂಗಳೂರು ಇಲ್ಲಿ ತಾರೀಕು 14ನೇ ರವಿವಾರದಂದು ಬೆಳಿಗ್ಯೆ 9.30 ರಿಂದ ಮುಕ್ತ ಅವಕಾಶದೊಂದಿಗೆ ಪ್ರಾರಂಭಗೊಳ್ಳಲಿದೆ. ಸಂಗೀತ ಆಸಕ್ತರೆಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕೋರಲಾಗಿದೆ
ಅಧ್ಯಕ್ಷರು: ಶ್ರೀ ಕೇಶವ ಕನಿಲ ಕೋಶಾಧಿಕಾರಿ : ಶ್ರೀಮತಿ ಹರಿಣಿ ಉದಯ್ ಪ್ರಧಾನ ಕಾರ್ಯದರ್ಶಿ: ಶ್ರೀ ರಾಮ್ ಕುಮಾರ್ ಅಮೀನ್ ಉಪಾಧ್ಯಕ್ಷರು : ಧನುರಾಜ್ ಅತ್ತಾವರನಿಕಟ ಪೂರ್ವ ಅಧ್ಯಕ್ಷರು : ದೀಪಕ್ ರಾಜ್ ಉಳ್ಳಾಲ್ ಮಾಜಿ ಅಧ್ಯಕ್ಷರು : ಶ್ರೀ ಮೊಹಮ್ಮದ್ ಇಕ್ಬಾಲ್ ಕಾಟಿಪಳ್ಳ ಮಾಜಿ ಅಧ್ಯಕ್ಷರು : ಶ್ರೀ ಮುರಳೀಧರ ಕಾಮತ್