ಪುತ್ತೂರು: ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾದ ವರ್ಷಾವಧಿ ಜಾತ್ರೋತ್ಸವ ಹಾಗೂ ಶ್ರೀ ಧರ್ಮದೈವಗಳ ನೇಮೋತ್ಸವವು ಜ.3 ಹಾಗೂ 4 ರಂದು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿರವರ ನೇತೃತ್ವದಲ್ಲಿ ಜರಗಲಿದ್ದು ಆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಡಿ.27ರಂದು ನೆರವೇರಿತು.
ಸ್ಥಳೀಯ ರಾಮಕೃಷ್ಣ ಭಟ್ ಖಂಡಿಗರವರ ತೋಟದಲ್ಲಿ ಅರ್ಚಕರಾದ ಶ್ರವಣ್ ಭಟ್ ರವರು ಬಾಳೆಗೊನೆ ಕಡಿಯುವ ಮೂಲಕ ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಪೂಜಾರಿ ಅಮ್ಮುಂಜ, ಸದಸ್ಯರಾದ ನಿರಂಜನ್ ಶೆಟ್ಟಿ, ಹೊನ್ನಪ್ಪ ನಾಯ್ಕ, ರಮೇಶ್ ಭಟ್ ಅಂಗಿತ್ತಾಯ, ನಾರಾಯಣ ಮಣಿಯಾಣಿ, ಗುರುಪ್ರಸಾದ್ ಮಾದೇರಿ, ನಳಿನಿ ಸುಧಾಕರ್, ಮಾಜಿ ಸದಸ್ಯರಾದ ರೇಖನಾಥ್ ರೈ ಸಂಪ್ಯದಮೂಲೆ, ಮಾಲಿನಿ ಹೆಗ್ಡೆ ಅಮ್ಮುಂಜ, ಸ್ಥಳೀಯರಾದ ಜಗನ್ನಾಥ ಶೆಟ್ಟಿರವರು ಉಪಸ್ಥಿತರಿದ್ದರು.
























