777 ಚಾರ್ಲಿ ಸಿನಿಮಾದ ನಂತರ ಕಾಣೆಯಾಗಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನೇಮೋತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟರಲ್ಲೇ ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದು, ಬಬ್ಬುಸ್ವಾಮಿ ದೈವದ ಸಿರಿ ಸಿಂಗಾರ ನೇಮೋತ್ಸವದಲ್ಲಿ ಭಾಗಿಯಾಗಿ ಅಭಯ ಪಡೆದಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾದ ಯಶಸ್ಸಿನ ಬಳಿಕ ಅಭಿಮಾನಿಗಳಿಂದ ಅಂತರ ಕಾಯ್ದು ಕೊಂಡಿದ್ದರು. ಇತ್ತ ರಕ್ಷಿತ್ ಶೆಟ್ಟಿಯನ್ನ ಮತ್ತೆ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದು, ರಿಚರ್ಡ್ ಆಂಟನಿ ಸಿನಿಮಾಗಾಗಿ ಕಾದು ನೋಡುತ್ತಿದ್ದಾರೆ. ಇಷ್ಟರಲ್ಲೇ ರಕ್ಷಿತ್ ಹೊಸ ಸಿನಿಮಾ ಕೂಡ ಅನೌನ್ಸ್ ಮಾಡಲಿದ್ದಾರೆ ಅಂತ ಹೇಳಲಾಗ್ತಿದೆ. ಹೊಸ ಸಿನಿಮಾಗೂ ಮುನ್ನ ರಕ್ಷಿತ್ ಶೆಟ್ಟಿ ದೈವದ ಮೊರೆ ಹೋಗಿದ್ದಾರೆ.
ಕರಾವಳಿಯಲ್ಲಿ ದೈವರಾಜ ಬಬ್ಬುಸ್ವಾಮಿ ಕಾರ್ಣಿಕ ದೈವ ಅಂತಾನೇ ಪ್ರಸಿದ್ಧಿ. ನಟ ರಕ್ಷಿತ್ ಶೆಟ್ಟಿ ಉಡುಪಿಯ ಅಲೆವೂರು ಬಬ್ಬುಸ್ವಾಮಿ ದೈವದ ಸಿರಿ ಸಿಂಗಾರ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಇಷ್ಟರಲ್ಲೇ ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದು, ನೇಮೋತ್ಸವದಲ್ಲಿ ಭಾಗಿಯಾಗಿ ಬಬ್ಬುಸ್ವಾಮಿ ದೈವದ ಅಭಯ ಪಡೆದುಕೊಂಡರು.ನಟ ರಕ್ಷಿತ್ ಸ್ಪರ್ಶ್ ಮಸಾಲಾ ಮಾಲೀಕ ಶಿವಕುಮಾರಯ್ಯ ಬಯೋಪಿಕ್ನಲ್ಲಿ ನಟಿಸಲಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.
ಅಲೆವೂರು ದೊಡ್ಡಮನೆ ಕರ್ನಾಟಕ ಕರಾವಳಿಯ ಪ್ರಸಿದ್ಧ ಗುತ್ತು ಮನೆತನ. ಬಂಟ ಜಾತಿಗೆ ಸೇರಿದ ರಕ್ಷಿತ್ ಶೆಟ್ಟಿ ಈ ಕುಟುಂಬದ ಕುಡಿ. ಈ ನಡುವೆ ರಕ್ಷಿತ್ ಶೆಟ್ಟಿ ಕಾಣೆಯಾಗಿದ್ದರು.ಸಡನ್ ಆಗಿ ಏನಾಯ್ತು? ಎಲ್ಲಿ ಹೋದ್ರು ರಕ್ಷಿತ್ ಎಂದು ಸಿಂಪಲ್ ಸ್ಟಾರ್ ಅಭಿಮಾನಿಗಳು ತುಂಬಾ ದಿನದಿಂದ ತಲೆ ಕೆಡಿಸಿಕೊಂಡಿದ್ದರು. ಈಗ ಅವರೆಲ್ಲರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಕ್ಷಿತ್ ಶೆಟ್ಟಿ ನೇಮೋತ್ಸವದಲ್ಲಿ ಭಾಗಿಯಾಗುವ ಮೂಲಕ ಅಭಿಮಾನಿಗಳಲ್ಲಿ ಹೊಸ ಸಿನಿಮಾದ ಭರವಸೆಯನ್ನ ಹುಟ್ಟು ಹಾಕಿದ್ದಾರೆ.



























