ಪುತ್ತೂರು: ಕೆದಂಬಾಡಿ ಗ್ರಾಮದ 2 ವಾರ್ಡ್ ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಭೇಟಿ ನೀಡಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೂತ್ ಸಮಿತಿ ರಚನೆ, ವಲಯ ಕಾಂಗ್ರೆಸ್ ಗೆ ಪದಾಧಿಕಾರಿಗಳ ನೇಮಕ, ಹಾಗೂ ಆರೋಗ್ಯ ಸಹಾಯ ಹಸ್ತದ ಬಗ್ಗೆ ಸಮಾಲೋಚನೆ ನಡೆಸಿದರು. ಪಕ್ಷದ ಸ್ಥಳೀಯ ಮುಖಂಡ ಅಬ್ದುಲ್ ಗಟ್ಟರವರ ಮನೆಯಲ್ಲಿ ಸಮಾಲೋಚನೆ ಸಭೆ ನಡೆಯಿತು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್. ಮಹಮ್ಮದ್ ಅಲಿ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪುರಂದರ ರೈ , ಸ್ಥಳೀಯ ಮುಖಂಡರುಗಳಾದ ಗಂಗಾಧರ ರೈ ಕುಯ್ಯಾರು, ಇಸ್ಮಾಯಿಲ್ ಗಟ್ಟಮನೆ, ಅಶ್ರಪ್, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ಮೆಲ್ವೀನ್ ಮೊಂತೆರೂ, ಬ್ಲಾಕ್ ಕಾರ್ಯದರ್ಶಿಯಾದ ಹಬೀಬ್ ಕಣ್ಣೂರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಅಸ್ಮ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ ಭಂಡಾರಿ ಚಿಲ್ಮೆತ್ತಾರ್ ಮತ್ತು ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ನಝೀರ್ ಉಪಸ್ಥಿತರಿದ್ದರು.