ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಅನ್ಯಮತೀಯರು ವಾಹನ ನಿಲುಗಡೆ ಮಾಡಿ, ದೇವಸ್ಥಾನದ ಭಕ್ತಾದಿಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಇದರ ತಾಲೂಕು ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ ರವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.
ಪುತ್ತೂರಿನ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದಿನಂಪ್ರತಿ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪಾವನರಾಗುತ್ತಾರೆ. ಆಗಮಿಸುವ
ಭಕ್ತಾದಿಗಳು ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ವಾಹನ ನಿಲುಗಡೆ ಮಾಡಬೇಕಾಗುತ್ತದೆ. ಆದರೆ ಸದ್ರಿ ದೇವರಮಾರು ಗದ್ದೆಯಲ್ಲಿ ಸಮೀಪದ ಅಂಗಡಿ
ಮುಂಗಟ್ಟುಗಳಿಗೆ ಮತ್ತು ಪಕ್ಕದಲ್ಲಿರುವ ಮಸೀದಿಗೆ ಬರುವ ಅನ್ಯಮತೀಯರು, ಸಮೀಪದ ಅಂಗಡಿ ಮುಂಗಟ್ಟಿನ ವ್ಯಾಪಾರಿಗಳು ಬೆಳಿಗ್ಗೆ ತನ್ನ ವಾಹನವನ್ನು ನಿಲ್ಲಿಸಿ ರಾತ್ರಿ ಹೊತ್ತು ಅದನ್ನು ತೆಗೆದುಕೊಂಡು ಹೋಗುವ ಪ್ರಮೇಯ ನಿರ್ಮಾಣವಾಗಿದೆ. ಇದರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬಹಳ ತೊಂದರೆಯಾಗುತ್ತಿದೆ.
ದೇವಸ್ಥಾನದ ರಥ ನಿಲ್ಲಿಸುವ ಪ್ರದೇಶ ಹಾಗೂ ಸಮೀಪದ ನಾಗ ದೇವರ ಕಟ್ಟೆ ಬಳಿಯು ಅನ್ಯಮತೀಯರು ವಾಹನ
ನಿಲ್ಲಿಸುವುದರಿಂದ ರಥವನ್ನು ವೀಕ್ಷಿಸಲು ಬರುವ ಭಕ್ತಾದಿಗಳಿಗೆ ಮತ್ತು ನಾಗ ದೇವರ ಕಟ್ಟೆಗೆ ಹೋಗುವ ಭಕ್ತಾದಿಗಳಿಗೂ ತೊಂದರೆಯಾಗುತ್ತಿದೆ. ಭಕ್ತಾದಿಗಳಿಗೆ ದೇವಸ್ಥಾನದ ಎದುರು ಭಾಗದಲ್ಲಿ ವಾಹನ ಪೂಜೆ ನಡೆಸಲು ಕಷ್ಟವಾಗುತ್ತಿದೆ.
ಅದೇ ರೀತಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ವಾಹನ ಚಾಲಕರು ಅತೀ ವೇಗದಿಂದ ಹೋಗುವುದು ಕರ್ಕಶವಾದ ಶಬ್ದ ಮಾಡಿ ತೊಂದರೆ ಕೊಡುವುದು, ಮಳೆಗಾಲದಲ್ಲಿದ್ದ ಕೆಸರು ನೀರನ್ನು ಅಲ್ಲಿ ನಡೆದುಕೊಂಡು ಹೋಗುವ ಭಕ್ತಾದಿಗಳಿಗೆ ಸಿಂಪಡಿಸುವುದು ನಡೆಯುತ್ತಿದೆ.
ರಾತ್ರಿ ಹೊತ್ತಿನಲ್ಲಿ ದೇವಸ್ಥಾನದ ಎದುರಿನ ದೇವರ ಮಾರು ಗದ್ದೆಯಲ್ಲಿ ವಾಸಿಸುವ ಹೋರಿ ದನಗಳನ್ನು ಕದ್ದುಕೊಂಡು ಹೋಗುವ ಪ್ರಮೇಯವು ನಿರ್ಮಾಣವಾಗಿದೆ,
ಹಿಂದೆಯೂ ಇಂತಹ ಹಲವು ಘಟನೆಗಳು ಕಂಡು ಬಂದಿರುತ್ತದೆ. ಆದುದರಿಂದ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಯಾವುದೇ ಅನ್ಯಮತೀಯರಿಗೆ ವಾಹನ ನಿಲುಗಡೆಗೆ ಅವಕಾಶ ನೀಡಬಾರದಾಗಿ ಮತ್ತು ಎದುರಿನ ರಸ್ತೆಗಳಲ್ಲಿ ಮತ್ತು ರಥ ಬೀದಿಗಳಲ್ಲಿ ಅನ್ಯಮತೀಯರಿಗೆ ವಾಹನ ಪ್ರವೇಶ ನಿಷೇಧಿಸಬೇಕು
ಎಂಬುದಾಗಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗಿ ಮತ್ತು ದೇವಸ್ಥಾನದ ಎದುರು ಭಾಗದಲ್ಲಿ ಅನೈತಿಕ ಚಟುವಟಿಕೆ ನಡೆಯದಂತೆ ಸಿಸಿ ಕ್ಯಾಮರಾ ಅಳವಡಿಸಬೇಕು ರಾತ್ರಿ ಹೊತ್ತಿನಲ್ಲಿ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷರಾದ ಅಶೋಕ್ ತ್ಯಾಗರಾಜ ನಗರ, ತಾಲೂಕು ಉಪಾಧ್ಯಕ್ಷರಾದ ಶಶಿಕಾಂತ್ ಕೋರ್ಟ್ ರೋಡ್, ತಾಲೂಕು ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ, ತಾಲೂಕು ಮಾತೃ ಸುರಕ್ಷಾ ಪ್ರಮುಖ್ ಸ್ವಸ್ತಿಕ್ ಮೇಗಿನ ಗುತ್ತು, ನಗರ ಕಾರ್ಯದರ್ಶಿ ರಾಜ ಕೋರ್ಟ್ ರೋಡ್, ನಗರ ಸಂಪರ್ಕ ಪ್ರಮುಖ್ ರಾಕೇಶ್ ಓಜಾಲ, ನಗರ ಹಿಂದೂ ಯುವ ವಾಹಿನಿ ಪ್ರಮುಖರಾದ ಮನೀಶ್ ಬನ್ನೂರು ಉಪಸ್ಥಿತರಿದ್ದರು.