ಪುತ್ತೂರು: ನಾವು ಇವತ್ತು 75ನೇ ವರ್ಷದ ದೇಶದ ಸ್ವಾತಂತ್ರ ಸಂಭ್ರಮದಲ್ಲಿದ್ದೇವೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನೇತೃತ್ವದ ಭಾರತೀಯ ರಾಷ್ಟೀಯ ಕಾಂಗ್ರೆಸ್ ನ ಮೂಲಕ ನಡೆದ ಅಹಿಂಸಾ ಚಳುವಳಿಯಿಂದಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ, ದೇಶಕ್ಕಾಗಿ ಲಕ್ಷಾಂತರು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ್ದಾರೆ.
ನೆಹರೂ ಸೇರಿದಂತೆ ದೇಶದ ಮಹಾನ್ ನಾಯಕರು ಬ್ರಿಟಿಷರ ವಿರುದ್ದ ಮಾಡಿದ ಹೋರಾಟದಿಂದ ಇಂದು ನಾವು ಸ್ವಾತಂತ್ರ್ಯದ ಫಲವನ್ನು ಉಣ್ಣುತ್ತಿದ್ದೇವೆ. ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಇಡೀ ದೇಶದ ಸಂಪತ್ತನ್ನು ಲೂಟಿ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ದೇಶದಲ್ಲಿ ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್ ನೆಹರು ರವರು ಅಧಿಕಾರ ವಹಿಸಿ ಕೊಂಡ ಕಾಲದಲ್ಲಿ ಒಂದು ಸೂಜಿ ಉತ್ಪಾದನೆ ಮಾಡುವ ಶಕ್ತಿ ನಮ್ಮ ದೇಶಕ್ಕಿರಲಿಲ್ಲ, ಆಗ ದೇಶದ ಜನರು ಬಡತನದ ಬೇಗೆಯಲ್ಲಿ ಬಳಲುತ್ತಿದ್ದರು, ಆ ಸಂಧರ್ಭದಲ್ಲಿ ನೆಹರೂ ರವರ ದೂರ ದ್ರಷ್ಟಿಯ ಯೋಜನೆಯಿಂದಾಗಿ ದೇಶ ಅಭಿವೃದ್ಧಿಪಥದೆಡೆಗೆ ಸಾಗುವಂತಾಯಿತು, ದೇಶದ ಕಾಂಗ್ರೆಸ್ ಪ್ರಧಾನಿಗಳಾದ ಶ್ರೀಮತಿ ಇಂದಿರಾಗಾಂಧಿ ಗಾಂಧಿಯವರು ಕ್ರಾಂತಿಕಾರಕವಾದ ಭೂ ಮಸೂದೆ ಕಾನೂನು ಜ್ಯಾರಿಗೆ ತಂದು ಉಳುವವನೆ ಹೊಲದೊಡಯ ಎಂಬ ಘೋಷಣೆಯೊಂದಿಗೆ ಲಕ್ಷಾಂತರ ಜನ ಬಡವರಿಗೆ ಭೂಮಿ ಸಿಗುವಂತೆ ಮಾಡಿರುತ್ತಾರೆ, ಶ್ರೀಮಂತರ ಕೈಯಲ್ಲಿದ್ದ ಬ್ಯಾಂಕ್ ಗಳನ್ನು ರಾಷ್ಟೀಕೃತ ಗೊಳಿಸಿ ಬಡವರಿಗೆ ಬ್ಯಾಂಕ್ ಗೆ ಹೋಗುವಂತೆ ಮಾಡಿರುತ್ತಾರೆ.
ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರು ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿರುತ್ತಾರೆ, ಜಗತ್ತು ಕಂಡ ಅತ್ಯಂತ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ರವರು ತಂದಂತಹ ಆರ್ಥಿಕ ಕ್ರಾಂತಿಯಿಂದಾಗಿ ಇಡೀ ದೇಶದ ಜನರು ನೆಮ್ಮದಿಯಿಂದ ಬದುಕುತ್ತಿದ್ದರು, ಆದರೆ ಈಗ ಪ್ರಧಾನಿ ಮೋದಿಯವರ ತಂದ ಕೆಲವು ಜನ ವಿರೋಧಿ ಕಾರ್ಯಕ್ರಮಗಳಿಂದ ದೇಶದ ಜನರು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ, ಮೋದಿಯವರು ಬಂಡವಾಳ ಶಾಹಿಗಳಿಗೆ ದೇಶದ ಆಸ್ತಿಗಳನ್ನು ಮಾರುತ್ತಿದ್ದಾರೆ,
ಕೆಲವೇ ಕೆಲವು ಬಂಡವಾಳಶಾಹಿ ಗಳಿಗಾಗಿ ದೇಶವನ್ನು ಒತ್ತೆ ಇಡುವಂತ ಕೆಲಸ ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಹೇಳಿದರು. ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯದ ದಿನಾಚರಣೆಯ ಅಂಗವಾಗಿ ನಡೆದ ಧ್ವಜಾರೋಹಣಗೈದು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನ್ಯಾಯವಾದಿಗಳಾದ ಭಾಸ್ಕರ ಕೋಡಿಂಬಾಳ ರವರು, ದ.ಕ ಜಿಲ್ಲೆಯಲ್ಲಿ ಅದರಲ್ಲೂ ಪುತ್ತೂರು, ಸುಳ್ಯ ಭಾಗದಲ್ಲಿ ಈ ಹಿಂದೆ ನಡೆದಂತ ಸ್ವಾತಂತ್ರ ಹೋರಾಟದ ವಿಚಾರವನ್ನು ತಿಳಿಸಿದರು. ನ್ಯಾಯವಾದಿ ಸಾಯಿರಾ ಝುಬೈರ್ ರವರು ಮಾತನಾಡಿ ದೇಶದ ಮಹಾನ್ ನಾಯಕರ ಹೋರಾಟದಿಂದ ಪಡಕೊಂಡ ಸ್ವಾತಂತ್ರವನ್ನು ಬಿಜೆಪಿಯ ದುರಾಡಳಿತದಿಂದ ನಮಗೆ ಸಿಕ್ಕಿದ ಸ್ವಾತಂತ್ರ ಕಳೆದು ಕೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ, ಇದರ ಕುರಿತು ಜಾಗೃತಿ ಮೂಡಿಸ ಬೇಕಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ದ ಕ ಜಿಲ್ಲಾ ಸಹಕಾರಿ ಯೂನಿಯನ್ನಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯ ದರ್ಶಿ ಯಾಕೂಬು ದರ್ಬೆ, ಬ್ಲಾಕ್ ಉಪಾಧ್ಯಕ್ಷ ಪಿ ವಿ ದಿನೇಶ್, ಮೌರಿಸ್ ಮಸ್ಕರೇನಸ್,ಅಲಿ ಕುಞ ಕೊರಿಂಗಿಲ, ಮನೋಹರ್ ರೈ ಎಂಡೆಸಾಗು, ಬ್ಲಾಕ್ ಪ್ರದಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಬ್ಲಾಕ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಬ್ಲಾಕ್ ಕಚೇರಿ ಕಾರ್ಯದರ್ಶಿ ಸಿರಿಲ್ ರೊಡ್ರಿಗಸ್, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೆರಾ, ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಬ್ಲಾಕ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಕೊಂಕಣಿ ಅಕಾಡಮಿಯ ಮಾಜಿ ಸದಸ್ಯ ದಾಮೋದರ ಭಂಡಾರ್ಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾರದಾ ಅರಸ್, ಮಹಿಳಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ ಬನ್ನೂರು, ಬ್ಲಾಕ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ಅಮ್ಮುಂಜೆ, ಮಹಿಳಾ ಸೇವಾದಳದ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶ್ರೀಮತಿ ಸನಮ್ ನಝೀರ್,ಒಳಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ,ಯಂಗ್ ಬ್ರಿಗೇಡ್ ನ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಮಾಜಿ ಬ್ಲಾಕ್ ಪ್ರದಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ, ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ನಝೀರ್, ಕಾಂಗ್ರೆಸ್ ಮುಖಂಡರಾದ ಸೂಫಿ ಬಪ್ಪಳಿಗೆ, ದಿನೇಶ್ ಕಾಮತ್, ನಝೀರ್ ಖಾನ್ , ಶಿರಾಜ್ ಸಾಮೆತ್ತಡ್ಕ, ಅನಿಲ್ ಪಾಯ್ಸ್, ನಂದ ಕಿಶೋರ್ ನಾಯ್ಕ್, ಉಪಸ್ಥಿತರಿದ್ದರು. ಬ್ಲಾಕ್ ಉಪಾಧ್ಯಕ್ಷ ಜಿ ಮಹಾಬಲ ರೈ ಸ್ವಾಗತಿಸಿದರು.





























