ಉಪ್ಪಿನಂಗಡಿ: ಕೆಮ್ಮಾರ ಹೊಳೆ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಕೊಚ್ಚಿ ಹೋಗಿ ಮೃತ ಪಟ್ಟ ಶಫೀಕ್ ಮನೆಗೆ ಪುತ್ತೂರು ತಾಲೂಕು ಶಾಸಕ ಸಂಜೀವ ಮಠಂದೂರು ರವರು ಭೇಟಿ ನೀಡಿ ಸಾಂತ್ವನ ಹೇಳಿದರು.

ನೆರೆ ಸಂತ್ರಸ್ತರ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶೌಕತ್ ಆಲಿ, ಮಾಜಿ ಅಧ್ಯಕ್ಷರಾದ ಮಾಲತಿ ಹರಿನಾರಾಯಣ, ಪಂಚಾಯತ್ ಸದಸ್ಯರಾದ ಹೇಮಂತ್ ಮೈತಲಿಕೆ, ಬೂತ್ ಕಾರ್ಯದರ್ಶಿ ವಾಮನ ಬರೆಮೇಲು, ಊರಿನ ಪ್ರಮುಖರಾದ ಇಸ್ಮಾಯಿಲ್ ಕೆಮ್ಮಾರ, ಖಾಸೀಂ ಕೆಮ್ಮಾರ, ಅದಂ ಕೆ. ಉಪಸ್ಥಿತರಿದ್ದರು.


























