ಉಪ್ಪಿನಂಗಡಿ: ಕೆಲ ದಿನಗಳ ಹಿಂದೆ ಹಳೆಗೇಟು ಬಳಿ ನಡೆದ ತಲುವಾರು ದಾಳಿಗೆ ಸಂಬಂಧಿಸಿದಂತೆ ಮೂವರು ಪಿ ಎಫ್ ಐ ಮುಖಂಡರನ್ನು ಉಪ್ಪಿನಂಗಡಿ ಪೊಲೀಸರು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆ ತಂದಿದ್ದು, ಈ ಬಗ್ಗೆ ವಿಷಯ ತಿಳಿದ ಪಿ ಎಫ್ ಐ ಕಾರ್ಯಕರ್ತರು ಪೊಲೀಸ್ ಠಾಣೆಯ ಬಳಿ ಜಮಾಯಿಸಿದ ಘಟನೆ ಡಿ.14 ರಂದು ನಡೆದಿದೆ.
ಪಿಎಫ್ ಐ ಮುಖಂಡರಾದ ಹಮೀದ್ ಮೆಜೆಸ್ಟಿಕ್ , ಝಕಾರಿಯ ಕೊಡಿಪ್ಪಾಡಿ ಹಾಗೂ ಮುಸ್ತಫಾ ಎಂಬವರನ್ನು ವಿಚಾರಣೆಗಾಗಿ ಪೊಲೀಸರು ಠಾಣೆ ಕರೆತಂದಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಠಾಣೆಯ ಮುಂಭಾಗದ ರಸ್ತೆಯ ಬದಿ ಪಿ ಎಫ್ ಐ ಕಾರ್ಯಕರ್ತರು ಎಸ್ ಡಿ ಪಿ ಐ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.






























