ಮಂಗಳೂರು: ಇನ್ನೇನು ಚಳಿಗಾಲ ಅಂತ್ಯವಾಗುತ್ತಿದ್ದಂತೆ ಕರಾವಳಿಯಲ್ಲಿ ಚಳಿ ತೀವ್ರಗೊಂಡಿದೆ. ಇಂದು 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಈ ಋತುವಿನಲ್ಲಿ ಇದೇ ಮೊದಲ ಬಾರಿಗೆ ತಾಪಮಾನ 19 ಡಿಗ್ರಿ ಸನಿಹಕ್ಕೆ ಇಳಿದಿದೆ. ಈ ಬಾರಿ ಮಳೆ ಜನವರಿಯವರೆಗೂ ಸುರಿದಿದ್ದರಿಂದ ಚಳಿಯ ಪ್ರಮಾಣ ಕಡಿಮೆಯಾಗಿತ್ತು.
ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಂಗಳವಾರ ಬೆಳಗ್ಗೆ ಚಳಿಯ ವಾತಾವರಣ ಇತ್ತು. ಚಳಿ ವಾತಾವರಣದಿಂದ ಅಕಾಲಿಕ ಮಳೆಯಿಂದ ತತ್ತರಿಸಿದ್ದ ಕೃಷಿಕರು ಕೊಂಚ ನಿರಾಳರಾಗಿದ್ದಾರೆ.
ಇದೀಗ ಬಿಸಿಲಿನ ವಾತಾವರಣ ಹೆಚ್ಚಿದ್ದರಿಂದ ಅಡಿಕೆ ಬೆಳೆಗಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಸಂಜೆಯಿಂದಲೇ ಇಬ್ಬನಿ ಬೀಳಲು ಆರಂಭವಾಗಿದ್ದು, ಮುಂಜಾನೆ ಮಂಜು ಕವಿದ ವಾತಾವರಣದ ನಡುವೆ ಎಲ್ಲೆಡೆ ಚಳಿ ಆವರಿಸಿದೆ.
ಚಾರ್ಮಾಡಿ ಸಹಿತ ಶಿರಾಡಿ ಘಾಟಿ ಪ್ರದೇಶಗಳಲ್ಲಿ ರಾತ್ರಿ ಸಂಚಾರ ದುರ್ಗಮವಾ ಗಿದ್ದು, ರಸ್ತೆ ಸಹಿತ ಎದುರಿನಿಂದ ಬರುವ ವಾಹನ ಕಾಣದಷ್ಟು ದಟ್ಟ ಮಂಜು ಆವರಿಸುತ್ತಿದೆ. ಕನಿಷ್ಠ 18ರಿಂದ 20 ಡಿಗ್ರಿ ವರೆಗೆ ವಾತಾವರಣ ತಂಪೇರುತ್ತಿದ್ದು, ಅದೇ ಮಧ್ಯಾಹ್ನ ಉತ್ತಮ ಬಿಸಿಲಿನ ವಾತಾವರಣವೂ ಕಂಡುಬರುತ್ತಿದೆ.
ಮಂಗಳೂರು, ಉಡುಪಿಯಲ್ಲೂ ತೀವ್ರ ಚಳಿ ಮಂಗಳೂರು ಮತ್ತು ಉಡುಪಿಯಲ್ಲೂ ಚಳಿ ತೀವ್ರಗೊಂಡಿದೆ. ಈ ಬಾರಿ ಮೊದಲ ಬಾರಿಗೆ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಇನ್ನೂ ಎರಡು-ಮೂರು ದಿನ ಇದೇ ರೀತಿ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.