ವಿಟ್ಲ: ಭಾರತೀಯ ಜನತಾ ಪಾರ್ಟಿಯ ಮಾಣಿಲ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರನ್ನಾಗಿ ಗೀತಾನಂದ ಶೆಟ್ಟಿಯವರನ್ನು ಆಯ್ಕೆಮಾಡಲಾಯಿತು.
ಮಾಣಿಲ ಗ್ರಾಮದ ಈ ಹಿಂದಿನ ಶಕ್ತಿ ಕೇಂದ್ರದ ಸಂಚಾಲಕರು ಮತ್ತು ಮಂಡಲ ಕಾರ್ಯಕಾರಿಣಿ ಸದಸ್ಯರು, ಬಿಜೆಪಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದ ಸಭೆಯಲ್ಲಿ ಅಶಿಸ್ತು ಮತ್ತು ಅಗೌರವ ತೋರಿದರಿಂದ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರು ಇಬ್ಬರನ್ನು ಅಮಾನತುಗೊಳಿಸಿದ ಕಾರಣ ಮಾಣಿಲ ಶಕ್ತಿ ಕೇಂದ್ರಕ್ಕೆ ನೂತನ ಸಂಚಾಲಕರಾಗಿ ಗೀತಾನಂದ ಶೆಟ್ಟಿಯವರನ್ನು ಇಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ರವರು ನೇಮಕ ಮಾಡಿದರು.