ಬಂಟ್ವಾಳ: ಮಾಣಿಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೋತ್ಸವವು ಫೆ.6 ರಂದು ವಿಜೃಂಭಣೆಯಿಂದ ಜರುಗಿದ್ದು, ಇಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಮಾಣಿಗುತ್ತು ಸಚಿನ್ ರೈ ಯವರ ಮುಂದಾಳತ್ವದಲ್ಲಿ, ಶ್ರೀ ಶಾರದಾ ಯುವ ವೇದಿಕೆ ಮಾಣಿ, ಕೋಡಿ ಫ್ರೆಂಡ್ಸ್ ಮಾಣಿ ಹಾಗೂ ಮಾಣಿ ಯುವಕರ ತಂಡ ದೈವಸ್ಥಾನದ ಸುತ್ತಮುತ್ತ ಹಾಗೂ ದೈವಸ್ಥಾನಕ್ಕೆ ಬರುವ ರಸ್ತೆಯಲ್ಲಿದ್ದ ಕಸಗಳನ್ನು ತೆಗೆದು ಸ್ವಚ್ಛಗೊಳಿಸಿದರು.
ಶ್ರೀ ಶಾರದಾ ಯುವ ವೇದಿಕೆ ಮಾಣಿ, ಕೋಡಿ ಫ್ರೆಂಡ್ಸ್ ಮಾಣಿ ಹಾಗೂ ಮಾಣಿ ಯುವಕರ ತಂಡ ಹಲವಾರು ವರ್ಷಗಳಿಂದ ಜಾತ್ರೋತ್ಸವದ ಮರುದಿನ ಈ ಸ್ವಚ್ಚತಾ ಕಾರ್ಯವನ್ನು ಮಾಡುತ್ತ ಬರುತ್ತಿದ್ದು, ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

































