Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

    ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

    ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

    ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

    ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

    ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

    ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

    ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

    ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

    ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

    ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

    ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

    ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

    ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

    ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

    ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

    ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

ಬೆಳೆಯುವ ಸಿರಿ ಬಾಡದಿರಲಿ.. ಅನುಕಂಪದ ಅಲೆ ಪಸರಿಸಲಿ..ಈ ಹೆಣ್ಮಗಳ ಜೀವನದಲ್ಲಿ ಭಾಗ್ಯಲಕ್ಷ್ಮಿ ಯನ್ನು ತರುವ ಪುಣ್ಯದ ಕಾರ್ಯ ಮಾಡೋಣವೇ..!?

February 15, 2022
in ಅಂಕಣ, ಪುತ್ತೂರು
0
ಬೆಳೆಯುವ ಸಿರಿ ಬಾಡದಿರಲಿ.. ಅನುಕಂಪದ ಅಲೆ ಪಸರಿಸಲಿ..ಈ ಹೆಣ್ಮಗಳ ಜೀವನದಲ್ಲಿ ಭಾಗ್ಯಲಕ್ಷ್ಮಿ ಯನ್ನು ತರುವ ಪುಣ್ಯದ ಕಾರ್ಯ ಮಾಡೋಣವೇ..!?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

🖋 ಉಮೇಶ್ ಮಿತ್ತಡ್ಕ | ಹೆಸರು ಭಾಗ್ಯಲಕ್ಷ್ಮಿ..‌ ಅವಳ‌ ಜೀವನದಲ್ಲಿ ಭಾಗ್ಯಲಕ್ಷ್ಮಿ ಪ್ರವೇಶಿಸುವ ಸಮಯಕ್ಕೆ ತಪ್ಪಿ ಶನಿ ಪ್ರವೇಶಿಸಿದ..‌ ಶನಿ ಹೇಗೆ ಕಾಲಿಟ್ಟ ಅಂದರೆ ನಾವು ನೀವು ಬಿಡಿ, ಅವಳು ಕೂಡಾ ಯೋಚಿಸದ ರೀತಿಯಲ್ಲಿ ಆಕಸ್ಮಿಕವಾಗಿ ಪ್ರವೇಶಿಸಿದವನೇ ತನ್ನ ಪಾರಮ್ಯದ ಪರಾಕಾಷ್ಠೆಯನ್ನೇ ತೋರಿಸಿಬಿಟ್ಟ..‌ ಛೆ.. ದುರ್ವಿಧಿಯೇ.. ಛೆ.. ಗ್ರಹಚಾರವೇ..‌ ಅಯ್ಯೋ ಆ ಹುಡುಗಿಯ ಬಾಳೇ.. ಪಾಪ ದೇವರು ಹೀಗೆ ಮಾಡಬಾರದಿತ್ತು.. ಎಂಬಿತ್ಯಾದಿ ಸಾವಿರ ಸಾವಿರ ಮನಸ್ಸುಗಳು ಹೃದಯಂತರಾಳದಿಂದ ಮಿಡಿಯುವಷ್ಟು ಕ್ರೂರತನ ತೋರಿಸಿಬಿಟ್ಟ ಶನಿದೇವ…

Advertisement
Advertisement
Advertisement

ಹುಡುಗನಾದರೂ ಅಂಗವೈಕಲ್ಯಕ್ಕೊಳಾದರೆ ಈ ಸಮಾಜದಲ್ಲಿ ಬದುಕುವುದು ಕಷ್ಟಕರವಲ್ಲ. ಹುಡುಗಿಯ ಬಾಳಿನಲ್ಲಿ ಈ ರೀತಿಯ ದುರ್ದೈವ ಒದಗಿದರೆ ಆಕೆಯ ಕಣ್ಣೀರಿನ ಕಥೆಗೆ ಮಿಡಿದ ಹೃದಯಗಳು ಮತ್ತೆ ಮತ್ತೆ ವೇದನೆಗೊಳಗಾಗುವುದಿಲ್ಲವೇ?…

ಬೆಟ್ಟಂಪಾಡಿ ದೇವಾಲಯದಲ್ಲಿ ಅರ್ಚಕರ ಸಹಾಯಕರಾಗಿ ಕೆಲಸ‌ ನಿರ್ವಹಿಸಿಕೊಂಡು ಅಲ್ಪಸ್ವಲ್ಪ ಕೃಷಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಹರಿನಾರಾಯಣ ಭಟ್ ರವರಿಗೆ ಮೂರು ಜನ ಮಕ್ಕಳು. ಎರಡು ಗಂಡು. ಒಂದು ಹೆಣ್ಣು. ಪಿಯುಸಿ ಶಿಕ್ಷಣ ಮಾಡುತ್ತಿರುವ ಹೆಣ್ಣು ಮಗಳು ಭಾಗ್ಯಲಕ್ಷ್ಮಿ ಇನ್ನೂ ನಿಜ ಬದುಕಿನ ಬಾಗಿಲು ನೋಡಿಲ್ಲ. ತಾನು ಹುಟ್ಟಿದ ಮನೆಗೆ, ಕಾಲಿಟ್ಟ‌ ಮನೆಗೆ ಭಾಗ್ಯಲಕ್ಷ್ಮಿಯಾಗಿಯೇ ಇರಬೇಕಿತ್ತು. ಅಷ್ಟರಲ್ಲಿಯೇ ಆಕೆಯ ಬದುಕಿನ ಆಟ ಶುರುವಾಗಿಬಿಟ್ಟಿತು.

Advertisement
Advertisement

ಆಕೆಯ ಆಟ ಪಾಠದಲ್ಲಿ ಖುಷಿಪಟ್ಟಿದ‌ ಕುಟುಂಬಕ್ಕೆ ಫೆ. 3 ನೇ ತಾರೀಕಿನಂದು ಆಘಾತ ಬರಸಿಡಿಲಿನಂತೆ ಅಪ್ಪಳಿಸಿತ್ತು. ತನ್ನ ಸಂಬಂಧಿಕನ ಸ್ಕೂಟರ್ ನಲ್ಲಿ ಪುತ್ತೂರಿನಿಂದ‌ ತನ್ನ ಮನೆಗೆ ಪ್ರಯಾಣಿಸುವ ವೇಳೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯ ಕಲ್ಲರ್ಪೆ ಎಂಬಲ್ಲಿ ಅಪಘಾತವಾಗಿ ಎದುರಿನಿಂದ ಬರುತ್ತಿದ್ದ ಲಾರಿಯ ಚಕ್ರದಡಿ ಭಾಗ್ಯಲಕ್ಷ್ಮಿಯ ಕಾಲು ಸಿಲುಕಿ ದೇಹವೆಂಬ ಗುಡಿಗೆ ಕಂಬಗಳಂತೆ ಆಧಾರವಾಗಿದ್ದ ಕಾಲುಗಳಲ್ಲಿ ಒಂದು ಕಾಲು ಸಂಪೂರ್ಣ ತುಂಡಾಗಿ ಹೋಯಿತು. ಇನ್ನೊಂದು ಕಾಲಿನ ಮೇಲೆಯೂ ಲಾರಿಯ ಚಕ್ರ ತಿರುಗಿ ಆಕೆಯ ಜೀವನ‌ ಚಕ್ರವೇ ನಿಂತು ಹೋದಂತಾಯಿತು.

ಸಂಜೆಯ ವೇಳೆಗೆ ಮನೆಯ ಬೆಳಕು ಕಾಣಲಿದ್ದವಳು ಆಸ್ಪತ್ರೆಯ ಕದ ತಟ್ಟಿದಳು.‌ ಏನಾಯ್ತು ಏನಾಯ್ತು ಎಂದು ಊರಿಡಿ ಸುದ್ದಿ ಪಸರಿಸುವಷ್ಟರಲ್ಲಿ ಆಕೆಯ ತುಂಡಾಗಿ ಬಿದ್ದಿದ್ದ ಕಾಲನ್ನು ಮರುಜೋಡಿಸಲಾಗದೆಂಬ ವೈದ್ಯರ ಮಾತುಗಳು ಊರಿನಲ್ಲಿ ಪ್ರತಿಧ್ವನಿಸಿದಾಗ ನಾಗರಿಕ‌ ಮನಸ್ಸುಗಳು ಮಮ್ಮುಲ‌ ಮರುಗಿದವು. ಉಳಿದ ಇನ್ನೊಂದು ಕಾಲನ್ನಾದರೂ ಸರಿಪಡಿಸಿ ಆಕೆಯ ಜೀವನಕ್ಕೆ ಭಾಗಶಃ ಭಾಗ್ಯಲಕ್ಷ್ಮಿಯನ್ನಾದರೂ ಕರುಣಿಸಬಹುದೇ ಎಂಬ ಹರಸಾಹಸದಲ್ಲಿ ತೊಡಗಿದೆ ಮಂಗಳೂರಿನ ಎ.ಜೆ. ಆಸ್ಪತ್ರೆಯ ವೈದ್ಯ ಸಮೂಹ.. ಆದರೆ..!!?

ಆದರೆ ಈಕೆಗೆ ಮತ್ತೊಂದೋ‌ ಮಗದೊಂದೋ‌ ಜೀವನ ಕಲ್ಪಿಸಬೇಕಾದರೆ 10 ರಿಂದ 15 ಲಕ್ಷ ರೂಪಾಯಿಯಷ್ಟು ಖರ್ಚು ಮಾಡಬೇಕಾಗಿದೆ. ಒಂದು ಕಾಲಂತೂ ಸಂಪೂರ್ಣ ಕಳೆದುಕೊಂಡು ಜೀವನಪೂರ್ತಿ ಅಂಗವೈಕಲ್ಯಕ್ಕೊಳಗಾಗಬೇಕಿದೆ. ಒಂದು ಕಾಲಿನಲ್ಲಿಯಾದರೂ ಜೀವ ಚೈತನ್ಯ ತುಂಬಿ ನಡೆಯುವಷ್ಟರಮಟ್ಟಿಗೆ ಆಗಬೇಕಾದಲ್ಲಿ ಇಷ್ಟು ಖರ್ಚು ಮಾಡಲೇಬೇಕಿದೆ. ಇದು ಆಸ್ಪತ್ರೆಯಿಂದ ಹೊರಬರುವಷ್ಟರಮಟ್ಟಿಗೆ.. ಇನ್ನು ಆಕೆಯ ಭವಿಷ್ಯ..!? ದಿನದಿನದ ಜೀವನ ಸಾಗಿಸುತ್ತಿದ್ದ ಹರಿನಾರಾಯಣ ಭಟ್ ರವರು ಮೇಲ್ನೋಟಕರಾಗಿ ಕಣ್ಣಂಚಿನಲ್ಲಿ ಅಸಹಾಯಕತೆಯ ಕಣ್ಣೀರು ಬಿಟ್ಟರೆ ಬೇರೇನೂ ಕಾಣುತ್ತಿಲ್ಲ. ಇಲ್ಲದ ಆರೋಗ್ಯವನ್ನು ಬದಿಗಿರಿಸಿ ಇದ್ದ ಆರೋಗ್ಯದಲ್ಲಿ ಆಸ್ಪತ್ರೆಯಲ್ಲಿ ಮಗಳ ಆರೈಕೆಯಲ್ಲಿ ದಿನ‌ ಎಣಿಸುತ್ತಿದೆ ಹರಿನಾರಾಯಣ ಭಟ್ ದಂಪತಿ. ಮುದುಡುವ ಪ್ರಾಯಕ್ಕೆ ಆಸರೆಯಾಗಿ ಬದುಕಿನ ಅರಳುವಿಕೆಯನ್ನು ಕಾಣಿಸಬೇಕಿದ್ದ ಮಗಳ ಆಕ್ರಂದನ ಮತ್ತು ಭವಿಷ್ಯದ ಶೂನ್ಯತೆಯ ಕಲ್ಪನೆ ದಂಪತಿಯನ್ನು ದಿನ ದಿನ ವಿಲವಿಲನೆ ಒದ್ದಾಡಿಸುತ್ತಿದೆ. ಶನಿಯ ಅಬ್ಬರ.. ಮಾನವೀಯತೆಯ ಕಂಪನ ಒಂದೆಡೆ ಹೆಣ್ಣುಮಗಳ ಬಾಳಿನಲ್ಲಿ ಶನಿ ಅಬ್ಬರಿಸುತ್ತಿದ್ದರೆ ಇತ್ತ ಮಮ್ಮುಲ ಮರುಗಿದ ಸಮಾಜದಲ್ಲಿ ಮಾನವೀಯತೆ ಕಂಪಿಸಿ ಅನುಕಂಪದ ಅಲೆ ಸೃಜಿಸಿದೆ. ಭಾಗ್ಯಲಕ್ಷ್ಮಿಯ ಬಾಳು ಬೆಳಗುವಲ್ಲಿ ಜಾತಿ ವರ್ಣ ಬೇಧ ಮರೆತು ಸಮಾಜ ಒಟ್ಟಾಗುತ್ತಿದೆ.‌

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಅರ್ಚಕರ ಸಹಾಯಕರಾಗಿದ್ದ ಹರಿನಾರಾಯಣ ಭಟ್ ಕುಟುಂಬಕ್ಕೆ ನೆರವಾಗಲು ದೇವಾಲಯದ ಆಡಳಿತ ಮಂಡಳಿ ಕರೆ ನೀಡಿದೆ. ಮಾನವೀಯತೆ‌ ಎಲ್ಲೂ ಕುಂದಿಲ್ಲ. ಮುದುಡಿದ ಪುಷ್ಪವ ಅರಳಿಸಲು ಬರುವ ಸೂರ್ಯನ ಕಿರಣಗಳಂತೆ ಕಾಣುವ ಕಾಣದ ಕೈಗಳು ಸಹಾಯ ಹಸ್ತ ಚಾಚುತ್ತಿವೆ.. ಇನ್ನೊಬ್ಬರ ಬದುಕಿನಲ್ಲಿ ನಮ್ಮ ಬದುಕನ್ನೂ ಕಾಣುವ ಮನದ ಭಾವ ರಾರಾಜಿಸಲಿ.. ಅಸಹಾಯಕ ಬದುಕೆಂಬ ಸಿಂಧುವಿನ ಬಿಂದುವಾಗಿ ನಾವೂ ಬದುಕೋಣ ಎಂಬ ಆಶಯ ಈ ಲೇಖನದೊಂದಿಗೆ..

ಚಿಕಿತ್ಸಾ ವೆಚ್ಚ ಮತ್ತು ಆಕೆಯ ಜೀವನಕ್ಕಾಗಿ ಆರ್ಥಿಕ ಸಹಾಯ ಕೋರಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಹೊರಡಿಸಲಾದ ಪ್ರಕಟಣೆಯನ್ನು ಈ ಕೆಳಗೆ ನೀಡಲಾಗಿದೆ:

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ ಕೋರಿಕೆ
ಸಹೃದಯಿ ಬಂಧುಗಳೇ, ಶ್ರೀ ಹರಿನಾರಾಯಣ ಭಟ್ ಇವರು ಶ್ರೀ ಕ್ಷೇತ್ರದಲ್ಲಿ ಅರ್ಚಕರ ಸಹಾಯಕರಾಗಿದ್ದು ಇವರ ಮಗಳು ಭಾಗ್ಯಲಕ್ಷ್ಮಿ ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿನಿ ಫೆಬ್ರವರಿ 3 ರಂದು ರಸ್ತೆ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡು ಮಂಗಳೂರಿನ AJ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮನೆಯವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ದಾನಿಗಳು ತಮ್ಮಿಂದ ಸಾಧ್ಯವಾದ ಧನಸಹಾಯವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಿ ವಿದ್ಯಾರ್ಥಿನಿಯ ಚಿಕಿತ್ಸೆಗೆ ಸಹಕರಿಸಬೇಕಾಗಿ ವಿನಂತಿಸುವ ಅನುವಂಶಿಕ ಆಡಳಿತ ಮೊಕ್ತೇಸರರು ಮೊಕ್ತೇಸರರು, ಆಡಳಿತ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ.

ಬ್ಯಾಂಕ್ ಖಾತೆಯ ವಿವರ :
KRISHNA KUMAR B.K.
Bank of Baroda
Branch: Bettampady
A.C.NO : 70750100006156
IFSC Code : BARBOVJBEPA MICR Code 575012020
Google Pay or Phone pay 7022950749

ವಿ.ಸೂ. ಬ್ಯಾಂಕ್ ಖಾತೆಗೆ ಜಮಾ ಮಾಡಿದ ಮಾಹಿತಿಯನ್ನು ಶಿವಪ್ರಸಾದ್ ತಲೆಪ್ಪಾಡಿ 9449178231 ಇವರ ವಾಟ್ಸಪ್ ಗೆ ನೀಡಲು ಕೋರಿಕೆ

Advertisement
Previous Post

ಕೊಕ್ಕಡ: ನಿಯಂತ್ರಣ ತಪ್ಪಿ ಜೀಪು ಪಲ್ಟಿ: ಮಕ್ಕಳು ಸೇರಿದಂತೆ ಹಲವರಿಗೆ ಗಾಯ..!!

Next Post

ಕಾಸರಗೋಡು: ಆರ್.ಎಸ್.ಎಸ್. ಕಾರ್ಯಕರ್ತ ಜ್ಯೋತಿಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!!

OtherNews

ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!
Featured

ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

February 21, 2026
ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!
Featured

ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

February 21, 2026
ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!
Featured

ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

February 20, 2026
ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!
Featured

ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

February 20, 2026
ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!
Featured

ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

February 20, 2026
ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದ ಕಟ್ಟೆಗಳ ಜೀರ್ಣೋದ್ಧಾರ : ತಾಮ್ರದ ಶಾಸನ ಬೆಳಕಿಗೆ..!!!
Featured

ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದ ಕಟ್ಟೆಗಳ ಜೀರ್ಣೋದ್ಧಾರ : ತಾಮ್ರದ ಶಾಸನ ಬೆಳಕಿಗೆ..!!!

February 20, 2026

Leave a Reply Cancel reply

Your email address will not be published. Required fields are marked *

Recent News

ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

February 21, 2026
ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

February 21, 2026
ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

February 20, 2026
ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

February 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page