ಪುತ್ತೂರು: ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಫೆ.16 ರಂದು ನಡೆಯಿತು.
ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಕೋಡಿಂಬಾಳ ಮಾತನಾಡಿ, ಬಿಜೆಪಿಯವರು ಪ್ರತಿ ವರ್ಷ ಅಖಂಡ ಅಖಂಡ ಭಾರತ ಸಂಕಲ್ಪ ಎಂದು ಹೇಳಿ ಪಂಜಿನ ಮೆರವಣಿಗೆ ಮಾಡುತ್ತಾರೆ. ಪಾಕಿಸ್ತಾನ-ಆಫ್ಘಾನಿಸ್ತಾನ ಬಾಂಗ್ಲಾದೇಶ ಎಲ್ಲಾ ಒಂದಾಗಬೇಕು ಅಂತ ಹೇಳಿ ಅವರು ಈ ಹೋರಾಟವನ್ನು ಮಾಡುತ್ತಾರೆ. ಆದರೆ ಈಗ ದೇಶದಲ್ಲಿ ರಾಜ್ಯದಲ್ಲಿ ಎಲ್ಲಾ ಕಡೆಯನ್ನು ಅವರದೇ ಸರಕಾರ ಇದೆ ಆದ್ದರಿಂದ ಅವರು ಯಾಕೆ ಪಂಜಿನ ಮೆರವಣಿಗೆ ಮಾಡಬೇಕು..??, ಅವರು ಅಖಂಡ ಭಾರತವನ್ನು ನಿರ್ಮಾಣ ಮಾಡುವುದು ಇರಲಿ ಕಾಂಗ್ರೆಸ್ ಪಕ್ಷ ಒಟ್ಟು ಮಾಡಿದ ಭಾರತವನ್ನೇ ಅವರಿಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಮಾತನಾಡಿ, ಬಿಜೆಪಿ ಮತ್ತು ಎಸ್.ಡಿ.ಪಿ. ಐ ಒಳ ಒಪ್ಪಂದದಿಂದಾಗಿ ಇಂದು ಮತ್ತು ಕೇಸರಿ ಶಾಲಿನ ವಿವಾದ ಉಂಟಾಗಿದೆ. ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಇದೆಲ್ಲಾ ಚುನಾವಣೆಗಾಗಿ ಬಿಜೆಪಿ ಮತ್ತು ಎಸ್.ಡಿ.ಪಿ. ಐ ಅವರು ಮಾಡುತ್ತಾ ಇರುವಂತಹ ಕುತಂತ್ರ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಮಾತನಾಡಿ, ಕೆಂಪುಕೋಟೆ ಕೇಸರಿ ಧ್ವಜ ಹಾರಿಸುತ್ತೇವೆ, ರಾಷ್ಟ್ರ ಧ್ವಜವನ್ನು ಇಳಿಸುತ್ತೇವೆ ಎನ್ನುವಂತಹ ಸಂವಿಧಾನ ಬಾಹಿರವಾದಂಹ ಹೇಳಿಕೆಯನ್ನು ನಾವು ವಿರೋಧಿಸುತ್ತೇವೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಮಾತನಾಡಿ, ನಾವು ಪಂಜಿನ ಮೆರವಣಿಗೆ ಮಾಡಲು ಹೊರಟಾಗ ನಮ್ಮ ಮನವೊಳಿಸುತ್ತೀರಿ, ಆದರೇ ಎರಡು ಕೋಮುವಾದಿ ಸಂಘಟನೆಗಳು ನಿಮ್ಮ ಮಾತನ್ನೇ ಮೀರಿ, ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಪ್ರತಿಭಟನೆ ಮಾಡಿದಂತಹ ಘಟನೆಗಳು ಪುತ್ತೂರಿನಲ್ಲಿ ನಡೆದಿದೆ. ಭಾರತ ದೇಶದ ತಾಲಿಬಾನಿ ಸರಕಾರ ಅಫ್ಘಾನಿಸ್ತಾನದ ತಾಲಿಬಾನಿ ಸರಕಾರಕ್ಕೆ ಬಹಳ ಗುಟ್ಟಾಗಿ 200 ಕೋಟಿ ರೂ.ಸಹಾಯಧನವನ್ನು ಘೋಷಣೆ ಮಾಡಿದೆ. ಈ ಘೋಷಣೆಯ ಬಳಿಕ ಇಲ್ಲಿಯ ಲೋಕಸಭೆ ಸದಸ್ಯ ಹೇಳುತ್ತಾರೆ ತಾಲಿಬಾನಿ ಸಂಸ್ಕೃತಿ ಅಂತ ಮತ್ತೊಬ್ಬರನ್ನು ತೋರಿಸುತ್ತಾರೆ. ಯಾರದರೂ ಒಂದು ಗಂಡು-ಹೆಣ್ಣು ಮಾತನಾಡಿದಾಗ ಅವರ ಮೇಲೆ ಹಲ್ಲೆ ಮಾಡುವಂತದ್ದು, ಭಾರತದಲ್ಲಿ ನಡೆಯುತ್ತಿದೆ. ಅಫ್ಘಾನಿಸ್ತಾನದಲ್ಲಿಯೂ ನಡೆಯುತ್ತಿದೆ. ಅದನ್ನು ಭಾರತದಲ್ಲಿ ಹುಟ್ಟು ಹಾಕಿದವರು ಬಿಜೆಪಿಯವರು, ಸಂಘ ಪರಿವಾರದವರು ಎಂದು ಆರೋಪಿಸಿದರು.ಇನ್ನೂ ಮುಂದೆ ಯಾರಿಗೂ ಪಂಜಿನ ಮೆರವಣಿಗೆ ಅವಕಾಶ ಕೊಡಬಾರದು ಕೊಟ್ಟರೆ ಎಸ್ ಪಿ ಕಚೇರಿಯ ಮುಂದೆ 1000 ಜನ ಸೇರಿಸಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ ಕೌಶಲ್ ಶೆಟ್ಟಿ ಬಿಜೆಪಿ ಆಡಳಿತದ ವಿರುದ್ಧ ಮಾತನಾಡಿದರು. ಈ ವೇಳೆ ಸಚಿವ ಈಶ್ವರಪ್ಪ ರವರ ಭಾವಚಿತ್ರವನ್ನು ದಹನ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.