ಪುತ್ತೂರು: ಹಿಂದೂ ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆ ಸರ್ವೆ ಘಟಕದ 9ನೇ ವರ್ಷದ ಆಶ್ಲೆಷ ಬಲಿ, ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವೂ ಮಾ. 5 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರಾದ ಶ್ರೀರಾಮ ಕಲ್ಲೂರಾಯ, ದೇವಸ್ಥಾನದ ಅದ್ಯಕ್ಷರಾದ ಪ್ರಸಾದ್ ರೈ ಸೊರಕೆ, ವಸಂತ್ ರೈ ಸೊರಕೆ, ಪುತ್ತೂರು ತಾಲೂಕು ಮಾತೃ ಸುರಕ್ಷಾ ಸಂಯೋಜಕ ಸ್ವಸ್ತಿಕ್ ಮೆಗಿನಗುತ್ತು, ಹಿಂ.ಜಾ.ವೇ ಸರ್ವೆ ಘಟಕದ ಅಧ್ಯಕ್ಷ ಜಯಂತ್ ಭಕ್ತಕೋಡಿ, ಹಿಂ.ಜಾ.ವೇ ಸರ್ವೆ ಘಟಕದ ಮಾಜಿ ಅಧ್ಯಕ್ಷ ನವೀನ್ ರೈ ಮತ್ತು ಯೋಗಿಶ್ ಟಿ, ದೇವಪ್ಪ ಪೂಜಾರಿ ಸರ್ವೆ , ಕಿರ್ತೆಶ್ ಸರ್ವೆ, ದೇವಪ್ಪ ಕಾಡಬಾಗಿಲು ಉಪಸ್ಥಿತರಿದ್ದರು.