ಬೆಳ್ತಂಗಡಿ: ತಾಲೂಕಿನ ಕೊಕ್ಕಡದ ಮುಸ್ಲಿಂ ರಿಕ್ಷಾ ಚಾಲಕನೊಬ್ಬ, ಈ ಹಿಂದೆ ಕೊಕ್ಕಡದ ಸೌತಡ್ಕ ದೇವಾಲಯಕ್ಕೆ ಬಂದಿದ್ದ ಬೆಂಗಳೂರು ಮೂಲದ ಹಿಂದೂ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು,ಪ್ರೀತಿಸಿ ಮದುವೆಯಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಬೆನ್ನಲ್ಲೇ ಇಂದು ಕೊಕ್ಕಡದಲ್ಲಿ ಪ್ರವಾಸಿ ಭಕ್ತರು ಹಾಗೂ ಸ್ಥಳೀಯ ಮುಸ್ಲಿಂ ಆಟೋ ಚಾಲಕರ ನಡುವೆ ಹೊಯ್-ಕೈ ನಡೆದಿದ್ದು, ಸ್ಥಳೀಯರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಸುಧಾರಿಸಿದ ಪ್ರಯತ್ನಿಸಿದ ಘಟನೆ ನಡೆದಿದೆ.
ಕೊಕ್ಕಡದಲ್ಲಿ ಆಟೋ ಚಾಲಕನಾಗಿದ್ದ ಮುಸ್ಲಿಂ ಯುವಕ ಸಮೀರ್(27) ಎಂಬಾತ ಬೆಂಗಳೂರಿನ ಹಿಂದೂ ಯುವತಿ ಬಸಮ್ಮ ರಕ್ಕಸಗಿ(22) ಎಂಬಾಕೆಯನ್ನು ಮೇ. ತಿಂಗಳಿನಲ್ಲಿ ರಿಜಿಸ್ಟರ್ ಮದುವೆಯಾದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಹರಿದಾಡಿದ್ದು, ಇದೊಂದು ಲವ್ ಜಿಹಾದ್ ಷಡ್ಯಂತ್ರ ಎನ್ನುವ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.
ಕೊಕ್ಕಡದ ಪ್ರಸಿದ್ಧ ಗಣಪತಿ ದೇವಾಲಯಕ್ಕೆ ಇಂದು ಅನೇಕ ಬೇರೆ ಊರಿನ ಭಕ್ತರು ಆಗಮಿಸಿದ್ದರು ಅದರಂತೆ ಕೊಕ್ಕಡದಿಂದ ಕ್ಷೇತ್ರಕ್ಕೆ ಆಟೋರಿಕ್ಷಾದ ಮೂಲಕ ಪ್ರಯಾಣ ಬೆಳೆಸುವ ಕುಟುಂಬವು ಅತಿ ಹೆಚ್ಚು ಇಂದು ಒಂದು ಮುಸ್ಲಿಂ ಆಟೋದಲ್ಲಿ ಬಂದ ಭಕ್ತಾದಿಗಳಿಗೆ ಆಟೋ ಚಾಲಕ ತನ್ನ ನಂಬರನ್ನು ನೀಡುವುದನ್ನು ಇತರ ಭಕ್ತಾದಿಗಳು ನೋಡಿದ್ದು ಮುಸ್ಲಿಂ ಆಟೋ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ಇಂದು ಪ್ರವಾಸಿ ಭಕ್ತರು ಅಲ್ಲಿನ ಸ್ಥಳೀಯ ಆಟೋ ಚಾಲಕರೊಂದಿಗೆ ವಾಗ್ವಾದಕ್ಕಿಳಿದಿದ್ದು, ಒಂದಿಬ್ಬರು ಮುಸ್ಲಿಂ ಆಟೋ ಚಾಲಕರ ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಅಲ್ಲಿಗೆ ಶಾಂತವಾಗಿದ್ದ ವಾತಾವರಣ ಹದಗೆಟ್ಟಿದ್ದು,ಮುಂದುವರಿದ ಭಾಗವಾಗಿ ಕೊಕ್ಕಡದ ಸ್ಥಳೀಯ ಮುಸ್ಲಿಂ ಯುವಕರು ಗ್ಯಾಂಗ್ ಕಟ್ಟಿಕೊಂಡು ಬಂದು ಹಿಂದೂ ಆಟೋ ಚಾಲಕರನ್ನು ಹಾಗೂ ಪ್ರವಾಸಿ ಭಕ್ತರನ್ನು ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದ್ದು, ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ತಿಳಿದು ಬಂದಿದೆ.


























