ಪುತ್ತೂರು: ಶಿವಮಣಿ ಕಲಾ ಸಂಘ ಶಿವನಗರ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಇಂದು ರಕ್ತೇಶ್ವರಿ ಅಂಗನವಾಡಿಯಲ್ಲಿ ನಡೆಯಿತು.
ಹತ್ತನೇ ತರಗತಿಯ ಅತ್ಯುತ್ತಮ ಅಂಕಗಳಿಗಾಗಿ ಶ್ರೀಮನ್ ಹಾಗೂ ಸ್ವಾತಿ ಇವರನ್ನು ಸನ್ಮಾನಿಸಲಾಯಿತು. ಹಾಗೂ ನೂತನ ಶಿವಮಣಿ ಸಾಂಸ್ಕೃತಿಕ ಸಮಿತಿ ರಚನೆ ಗೊಳಿಸಲಾಯಿತು.

ನೂತನ ಅಧ್ಯಕ್ಷರಾಗಿ ಸಂತೋಷ್ ಮುರ, ಉಪಾಧ್ಯಕ್ಷರಾಗಿ ವಿನೋದ್ ಗಾಣಿಗ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಸವಣೂರು, ಉಪ ಕಾರ್ಯದರ್ಶಿಯಾಗಿ ರತ್ನ ಕೆ ನಾಯರ್, ಗೌರವಾಧ್ಯಕ್ಷರಾಗಿ ಕಲಾವಿದ ಕೃಷ್ಣಪ್ಪ ಕಲ್ಲೇಗ, ಗೌರವ ಸಲಹೆಗಾರರಾಗಿ ರವೀನ ಅಂಜಲಿ ಆಯ್ಕೆಗೊಂಡರು.

ಈ ವೇಳೆ ತಂಡದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಲಾಯಿತು. ಸುದರ್ಶನ್ ಪುತ್ತೂರು ರವರು ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಮನು ಕುಮಾರ್ ಸ್ವಾಗತ ಹಾಗೂ ಧನ್ಯವಾದ ಸಮರ್ಪಿಸಿದರು. ಕಲರ್ ಸಂಘದ ಅಧ್ಯಕ್ಷ ದೀಪಕ್ ಉಪ್ಪಿನಂಗಡಿ ಹಾಗೂ ನಗರಸಭಾ ಸದಸ್ಯರಾದ ಶಿವರಾಮ ಸಪಲ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಲಾವಿದರು ಪೋಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


























