ಪಡುಬಿದ್ರಿ: ಕಂಚಿನಡ್ಕ ಮಿಂಚಿನಬಾವಿ ಕ್ಷೇತ್ರದಲ್ಲಿ ಜೂ.12 ರಂದು ತಡರಾತ್ರಿ ಎರಡು ಬಣಗಳ ನಡುವೆ ಮತ್ತೆ ಗೊಂದಲ ಸೃಷ್ಟಿಯಾಗಿದೆ.
ಹಿಂದೂಪರ ಸಂಘಟನೆಗಳಿಂದ ಆದಿತ್ಯವಾರ ಕರ ಸೇವೆಗೆ ಕರೆ ನೀಡಲಾಗಿತ್ತು. ಕರಸೇವೆಯ ಪ್ರಯುಕ್ತ ಪಡುಬಿದ್ರಿ ಸಮೀಪದ ಕಂಚಿನಡ್ಕದ ಮಿಂಚಿನಬಾವಿ ಕ್ಷೇತ್ರಕ್ಕೆ ತಗಡು ಚಪ್ಪರ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಕರ್ತರು ಸ್ಥಳದಿಂದ ವಾಪಸ್ಸಾಗಿದ್ದರು.

ಕಾಮಗಾರಿಯ ದಿನ ಹೊಸತಾಗಿ ನಿರ್ಮಾಣವಾದ ಗುಳಿಗ ಕಟ್ಟೆ ನಿರ್ಮಾಣದ ವಿರೋಧವಾಗಿ ಸ್ಥಳೀಯ ಮುಸ್ಲೀಮರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮುಸ್ಲೀಮರಿಂದ ನೂತನ ಕಟ್ಟೆ ತೆರವು ಗೊಳಿಸುವಂತೆ ಆಗ್ರಹಿಸಿದರು.
ಕಟ್ಟೆ ನಿರ್ಮಾಣದ ಜಾಗದಲ್ಲಿ ಮನೆಗೆ ಹೋಗಲು ಗೇಟ್ ನಿರ್ಮಿಸಲು ನಿರ್ಧಾರ ಮಾಡಿದರು. ಕಟ್ಟೆ ನಿರ್ಮಿಸಿದಲ್ಲಿ ಈ ಹಿಂದೆ ಯಾವುದೇ ದೈವದ ಕಲ್ಲು ಇರಲ್ಲಿಲ್ಲ ಎಂಬುವುದು ಮುಸ್ಲೀಮರ ವಾದವಾಗಿತ್ತು. ಅಷ್ಟೇ ಅಲ್ಲದೆ ಸುಮ್ಮನೆ ವಿವಾದ ಸೃಷ್ಟಿಸಲು ಇದೊಂದು ದಾರಿ ಎಂಬುವುದು ಹಿಂದೂಗಳ ವಾದವಾಗಿತ್ತು.
ಇನ್ನು ಅನಾದಿಕಾಲದಿಂದಲೂ ಅದೇ ಜಾಗದಲ್ಲಿ ಗುಳಿಗನ ಕಲ್ಲು ಇತ್ತು. ಆ ಜಾಗ ಗಲೀಜು ಆಗಬಾರದೆಂಬ ಉದ್ದೇಶದಿಂದ ಒಂದೂವರೆ ಅಡಿ ಎತ್ತರದ ಕಟ್ಟೆ ನಿರ್ಮಿಸಿದೆ ಹೊರತು ಯಾವುದೇ ವಿವಾದ ನಿರ್ಮಿಸಲು ಅಲ್ಲ ಎಂಬುವುದು ಹಿಂದೂ ಕಾರ್ಯಕರ್ತರ ವಾದ ಅಲ್ಲದೆ ಯಾವುದೇ ಸಂದರ್ಭದಲ್ಲಿ ಕೂಡಾ ಕಟ್ಟೆ ತೆರವು ಗೊಳಿಸಲು ಬಿಡಲಾರೆವು ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಪೋಲೀಸರಿಂದ ಎರಡೂ ಬಣಗಳ ಮನವೊಲಿಕೆಗೆ ಯತ್ನಿಸಲಾಯಿತು.

ಪೋಲೀಸರ ಮನವೊಲಿಕೆಗೆ ಎರಡೂ ತಂಡಗಳು ಸ್ಥಳದಿಂದ ನಿರ್ಗಮಿಸಿದರು. ಆದರೆ ಕೆಲವೇ ನಿಮಿಷದಲ್ಲಿ ಮತ್ತೆ ಸ್ಥಳದಲ್ಲಿ ಜಮಾಯಿಸಿದ ಮುಸ್ಲಿಂಮರು. ಕಟ್ಟೆ ತೆರವು ಮಾಡದೆ ಈ ಸ್ಥಳದಿಂದ ಕದಲಲಾರೆವು ಎಂದು ಪಟ್ಟು ಹಿಡಿದು ಕುಳಿತರು. ಇದಕ್ಕೆ ಮಣಿದು ಮರಳಿದ ಹಿಂದೂ ಕಾರ್ಯಕರ್ತರು ಮರಳುವ ಮುನ್ನವೇ ಕಮಿಟಿ ಮೂರು ಸದಸ್ಯರ ಸಮ್ಮುಖದಲ್ಲಿ ಕಟ್ಟೆ ತೆರವು ಗೊಳಿಸಲಾಯಿತು. ಕಮಿಟಿ ಸದಸ್ಯರು ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದಾರೆ. ವಿಷಯ ತಿಳಿದು ಕ್ಷೇತ್ರದ ಭಕ್ತರು ಆಗಮಿಸಿ ಕಟ್ಟೆಯ ಮುಂದೆ ತೆಂಗಿನಕಾಯಿ ಒಡೆದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ರಾತ್ರಿ ಪೂರ್ತಿ ಪೋಲೀಸರು ಸ್ಥಳದಲ್ಲಿ ಬಂದೋಬಸ್ತು ನಡೆಸಿದರು. ಸದ್ಯ ಸ್ಥಳದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ..


























