ಪುತ್ತೂರು: ಕೈಕಾರ ಪನಡ್ಕ ನಿವಾಸಿ ನವೀನ್ ರೈ ಎಂಬವರು ದಾರಂದಕುಕ್ಕು ನಿವಾಸಿ ಸುಮಂಗಲ ಶೆಣೈ ರವರ ಜೊತೆಯಲ್ಲಿ ಫುಡ್ ಸೇಫ್ಟಿಗೆ ಸಂಬಂಧಿಸಿದ ಪ್ರಮಾಣಪತ್ರ ಕೊಡುವ ಕೆಲಸ ಮಾಡಿಕೊಂಡಿದ್ದು, ಈ ಬಗ್ಗೆ ಕೆಲಸದ ವಿಚಾರವಾಗಿ ಗಲಾಟೆ ಸಂಭವಿಸಿ ಸುಮಂಗಲ ರವರು ಕೈಕಾರ ನಿವಾಸಿ ನವೀನ್ ರೈ ಮತ್ತು ಆತನ ಪತ್ನಿ ನಿಮಿತಾ ರೈ ರವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನವೀನ್ ರೈ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಕೈಕಾರ ನಿವಾಸಿ ನವೀನ್ ರೈ ರವರು ಪುತ್ತೂರು ತಾಲೂಕು ಚಿಕ್ಕಮುಡ್ನೂರು, ದಾರಂದಕುಕ್ಕು ನಿವಾಸಿ ಸುಮಂಗಲಾ ಶೆಣೈ ರವರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ನವೀನ್ ರೈ ಮತ್ತು ಸುಮಂಗಲ ಶೆಣೈ ರವರು ಫುಡ್ ಸೇಫ್ಟಿಗೆ ಸಂಬಂಧಿಸಿದ ಪ್ರಮಾಣಪತ್ರ ಕೊಡುವ ಕೆಲಸ ಮಾಡಿಕೊಂಡಿದ್ದು, ಜೂ.27 ರಂದು ಸುಮಂಗಲಾ ರವರು ನವೀನ್ ರೈ ರವರ ಮನೆಗೆ ಬಂದು ಅವರ ಪತ್ನಿ ನಿಮಿತಾ ರವರ ಹಲ್ಲೆ ನಡೆಸಿದ್ದು, ಅಷ್ಟೇ ಅಲ್ಲದೇ ನವೀನ್ ರವರ ಮೇಲೂ ಬಿಸಿ ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಿಂದ ಹಲ್ಲೆ ನಡೆಸಿದ್ದು, ಬಳಿಕ ನಿಮಿತಾ ರೈ ಯು ಸುಮಂಗಲಾ ಶೆಣೈ ಕೈಯಿಂದ ಇಸ್ತ್ರಿ ಪೆಟ್ಟಿಗೆಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದಾಗ ಬಿಸಿಯಾಗಿದ್ದ ಇಸ್ತ್ರಿ ಪೆಟ್ಟಿಗೆಯು ಸುಮಂಗಲಾ ಶೆಣೈಯವರಿಗೆ ಕೂಡಾ ತಾಗಿರುತ್ತದೆ. ಬಳಿಕ ಸುಮಂಗಲಾ ಶೆಣೈ ರವರು ನವೀನ್ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ನಿಮಗೆ ಕೊಟ್ಟ ಕೆಲಸವನ್ನು ಸರಿಯಾಗಿ ಮಾಡಲು ಆಗುವುದಿಲ್ಲವಾ? ಈ ಸಲ ನಿಮ್ಮನ್ನು ಬಿಟ್ಟಿದ್ದೇನೆ. ಮುಂದಕ್ಕೆ ನನ್ನ ತಂಟೆಗೆ ಬಂದಲ್ಲಿ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆ.
ಈ ಘಟನೆಗೆ ನವೀನ್ ಮತ್ತು ಸುಮಂಗಲಾ ಶೆಣೈಯವರಿಗೆ ಕಂಪೆನಿಯ ಹಣಕಾಸಿನ ವ್ಯವಹಾರದಲ್ಲಿ ಹಾಗೂ ಕಂಪೆನಿಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಇರುವುದೇ ಕಾರಣವಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ 74/2022 ಕಲo: 448,323,324, 504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
ಜೂ.27 ರಂದು ಸುಮಂಗಲಾ ಶೆಣೈ ರವರು ಹಲ್ಲೆ, ಹಾಗೂ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನವೀನ್ ರೈ ಮತ್ತು ಆತನ ಪತ್ನಿ ನಿಮಿತಾ ರವರ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ಠಾಣೆಯಲ್ಲಿ ಅ.ಕ್ರ : 73/2022 ಕಲಂ: 324, 354(A), 323, 504, 506 r/w 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.


























