ಬೆಳ್ತಂಗಡಿ: ಪುರುಷೋತ್ತಮ ಎಂಬವರ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಶಿಶಿಲದ ಬದ್ರಜಾಲ್ ಎಂಬಲ್ಲಿ ನಡೆದಿದೆ.

ಬೊಲೆರೋ ಕಾರಿನಲ್ಲಿ ಬಂದ ತಂಡವೊಂದು ಪುರುಷೋತ್ತಮ್ ರವರ ಓಮ್ನಿ ಕಾರಿಗೆ ಡಿಕ್ಕಿ ಹೊಡೆದು, ನಂತರ ಓಮ್ನಿ ವಾಹನದ ಮೇಲೆ ದಾಳಿ ಮಾಡಿ ಜಖಂಗೊಳಿಸಿದ್ದು, ಅಷ್ಟೇ ಅಲ್ಲದೇ ಪುರುಷೋತ್ತಮ್ ರವರ ಮೇಲೂ ರಾಡ್ ಮತ್ತು ತಲ್ವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪುರುಷೋತ್ತಮ್ ರವರ ತಲೆ, ಕುತ್ತಿಗೆ ಮತ್ತು ಕಿವಿಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.



























