ಪುತ್ತೂರು: ನಿಯಂತ್ರಣ ತಪ್ಪಿ ಕ್ರೇನ್ ಹೊಂಡಕ್ಕೆ ಬಿದ್ದ ಘಟನೆ ಜು.10 ರಂದು ಬೆದ್ರಾಳ ಸಮೀಪ ನಡೆದಿದೆ.

ಕಾಣಿಯೂರು ಬೈತಡ್ಕ ಹೊಳೆಗೆ ಕಾರು ಬಿದ್ದ ಹಿನ್ನೆಲೆ ಕಾರ್ಯಾಚರಣೆ ನಡೆಸಲು ತೆರಳುತ್ತಿದ್ದ ಕ್ರೇನ್ ಬೆದ್ರಳಾ ಸಮೀಪ ಹೊಂಡಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ.
ವಾಹನವೊಂದಕ್ಕೆ ಸೈಡ್ ಕೊಡಲು ಹೋದ ವೇಳೆ ರಸ್ತೆ ಬದಿಯಲ್ಲಿ ಮಳೆಯಿಂದಾಗಿ ಮಣ್ಣು ಮೃದುವಾಗಿದ್ದ ಹಿನ್ನೆಲೆ ಕ್ರೇನ್ ನ ಒಂದು ಬದಿಯ ಚಕ್ರ ಮಣ್ಣಲ್ಲಿ ಹೂತು ಹೋಗಿದೆ. ಕ್ರೇನ್ ಚಾಲಕನಿಗೆ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.


























