ಪುತ್ತೂರಿನ ಹೆಸರಾಂತ ವೈದ್ಯರಾದ ಡಾ. ಎಮ್.ಕೆ.ಪ್ರಸಾದ್ ರವರಿಗೆ ಪ್ರತಿಷ್ಠಿತ ಐ.ಎಮ್.ಎ, ಕೆ.ಎಸ್.ಬಿ ಡಾಕ್ಟರ್ಸ್ ಡೇ ಪ್ರಶಸ್ತಿಗೆ ಪುರಸ್ಕೃತರಾಗಿರುವ ಹಿನ್ನಲೆಯಲ್ಲಿ ಜು.14 ರಂದು ಪುತ್ತೂರಿನ ಕೊಟೇಚಾ ಹಾಲ್ ನಲ್ಲಿ ನಾಗರಿಕ ಅಭಿವಂದನಾ ಸನ್ಮಾನ ನಡೆಯಲಿದೆ. ಎಂದು ಅಭಿವಂದನಾ ಸಮಿತಿಯ ಅಧ್ಯಕ್ಷ ಸುರೇಶ್ ಪುತ್ತೂರಾಯ ಮಾಹಿತಿ ನೀಡಿದರು.
ಸರಕಾರಿ ವೈದ್ಯರಾಗಿ, ಜನಾನುರಾಗಿಯಾಗಿರುವ ಡಾ. ಎಂ.ಕೆ. ಪ್ರಸಾದ್ ಎಲ್ಲಾ ವರ್ಗದವರಿಗೂ ಬೇಕಾದವರಾಗಿದ್ದಾರೆ. ಪುತ್ತೂರಿಗೆ ಗೌರವ ತಂದ ಡಾ. ಪ್ರಸಾದ್ ಅವರನ್ನು ನಾಗರಿಕ ಸನ್ಮಾನ ನೆರವೇರಿಸಬೇಕು ಎನ್ನುವ ಕಾರಣಕ್ಕಾಗಿ ಈ ಅಭಿವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಮೊದಲು ವೈದ್ಯರನ್ನು ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಕರೆತರಲಾಗುವುದು. ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ, ವೇದಮೂರ್ತಿ ರವೀಶ್ ತಂತ್ರಿ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.


























