ಪುತ್ತೂರು: ಇಂದು ನಿಧನರಾದ ವಕೀಲ ಸಂಘದ ಹಿರಿಯ ಸದಸ್ಯ ಸದಾಶಿವ ರೈ ರವರಿಗೆ ಪುತ್ತೂರು ವಕೀಲರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹಿರಿಯ ವಕೀಲರಾದ ಶ್ರೀರಾಮ್ ಮೋಹನ್ ರಾವ್,ಜಗನ್ನಿವಾಸ ರಾವ್, ಗೌರಿ ಶಂಕರ ಶಾನುಭೋಗ್, ಅರಂಥನಡ್ಕ ಬಾಲಕೃಷ್ಣ ರೈ ನುಡಿ ನಮನವನ್ನು ಸಲ್ಲಿಸಿದರು.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ನ್ಯಾಯಾಧೀಶರು, ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆವಿ,ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ,ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್, ಕೋಶಾಧಿಕಾರಿ ಶ್ಯಾಮ್ ಪ್ರಸಾದ್ ಕೈಲಾರ, ಹಿರಿಯ ಕಿರಿಯ, ವಕೀಲರೂ ಉಪಸ್ಥಿತರಿದ್ದರು.


























