ಪುತ್ತೂರು: ಸುಮಾರು 14 ವರ್ಷಗಳ ಹಿಂದೆ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆದ ಕಾಮಗಾರಿ ಕೆಲಸಗಳ ಬಾಕಿ ಮೊತ್ತ 71,250 ರೂ. ಅನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಮತ್ತು ಕಾರ್ಯದರ್ಶಿ ಜನಾರ್ಧನ ಜೋಯಿಸ ರವರ ವಿರುದ್ಧ ಜನಾರ್ಧನ ಬೆಳ್ಚಾಡ ಎಂಬವರು ದೇವಸ್ಥಾನದ ಆವರಣದಲ್ಲಿ ಆ.11 ರಂದು ‘ಉಪವಾಸ ಸತ್ಯಾಗ್ರಹ’ ನಡೆಸುತ್ತಿದ್ದಾರೆ.

ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಜೀರ್ಣೊದ್ಧಾರದ ಸಂದರ್ಭದಲ್ಲಿ ಕಲ್ಲಿನ ಕೆಲಸಗಳನ್ನು ಮಾಡಿದ್ದು, ಸದ್ರಿ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡ ರವರ ನಿರ್ದೇಶನದಂತೆ ದೇವಸ್ಥಾನದ ಸಂಪೂರ್ಣ ಕೆಲಸ ಕಾರ್ಯಕ್ರಮಗಳನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಿರುತ್ತೇನೆ.
ಸದ್ರಿ ಕಾಮಗಾರಿ ನಿರ್ವಹಿಸಿದ ಬಗ್ಗೆ 71,250 ರೂ. ಬಾಕಿ ಉಳಿಸಿದ್ದು, ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ದೈವಜ್ಞರು, ತಂತ್ರಿಗಳು ಊರಿನ ಭಕ್ತರ ಉಪಸ್ಥಿತಿಯಲ್ಲಿ ತಕ್ಷಣ ನೀಡುತ್ತೇನೆಂದು ಒಪ್ಪಿಕೊಂಡಿದ್ದು, ಆದರೇ ಈ ತನಕ ಹಣ ನೀಡಿರುವುದಿಲ್ಲ., ಹಲವಾರು ಬಾರಿ ಪರಿಪರಿಯಾಗಿ ವಿನಂತಿಸಿದರೂ ಲೋಕಪ್ಪ ಗೌಡ ಮತ್ತು ಜನಾರ್ಧನ ಜೋಯಿಸರು ಉಡಾಫೆ ಉತ್ತರ ನೀಡಿದ್ದು, ಇದರಿಂದಾಗಿ ಬೇಸತ್ತು, ಆ.11 ರಂದು ಉಪವಾಸ ಸತ್ಯಗ್ರಹವನ್ನು ದೇವಳದ ವಠಾರದಲ್ಲಿ ಮಾಡುವುದಾಗಿ ಜನಾರ್ಧನ್ ರವರು ತಿಳಿಸಿದ್ದಾರೆ.

ನ್ಯಾಯ ಒದಗಿಸಿ ಕೊಡುವಂತೆ ಸಂಬಂಧಪಟ್ಟ ಇಲಾಖೆ ಮತ್ತು ಊರಿನ ಭಕ್ತರಲ್ಲಿ ಅವರು ವಿನಂತಿಸಿದ್ದಾರೆ.
2008 ರಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಗಾರೆ ಕೆಲಸ ನಿರ್ವಹಿಸಿದ ಜನಾರ್ಧನ್ ರವರಿಗೆ ಕೆಲಸದ ಅರ್ಧ ಮೊತ್ತವನ್ನು ನೀಡಿದ್ದು, ನಂತರದ ಮೊತ್ತವನ್ನು ಮತ್ತೆ ನೀಡುವುದಾಗಿ ತಿಳಿಸಿದ್ದು, ಆದರೇ ಈವರೆಗೂ ಬಾಕಿ ಉಳಿದ ಮೊತ್ತವನ್ನು ನೀಡಿದೆ ಇದ್ದು, ಈ ಬಗ್ಗೆ ಕೆಲ ದಿನಗಳ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕೆಲಸಕ್ಕೆ ಬಂದವರಿಗೆ ಸರಿಯಾದ ಹಣ ಪಾವತಿ ಮಾಡದ ಕಾರಣ ಅವರ ಶಾಪಕ್ಕೆ ಗುರಿಯಾಗಿದ್ದು, ಈ ಹಿನ್ನೆಲೆ ಅವರ ಹಣ ನೀಡುವಂತೆ ಹೇಳಾಗಿದ್ದು, ಈ ಬಗ್ಗೆ ಹಣ ಕೊಡುವುದಾಗಿ ದೈವಜ್ಞರು, ತಂತ್ರಿಗಳು ಊರಿನ ಭಕ್ತರ ಉಪಸ್ಥಿತಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡ ರವರು ಕೊಡುವುದಾಗಿ ಒಪ್ಪಿಕೊಂಡಿದ್ದು, ನಂತರ ಚೆಕ್ ನೀಡುವುದಾಗಿ ಹೇಳಿ ಕೊಡದೆ ಸತಾಯಿಸಿರುವುದಾಗಿ ಆರೋಪ ಕೇಳಿ ಬರುತ್ತಿದೆ.
2008 ರಲ್ಲಿ ನಡೆದ ದೇವಸ್ಥಾನದ ಜೀರ್ಣೋದ್ಧಾರದ ವೇಳೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಲೋಕಪ್ಪ ಗೌಡ ರೇ ಆಗಿದ್ದು, ಈಗಿನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರೂ ಅವರೇ ಆಗಿದ್ದಾರೇ, ಈ ಹಿನ್ನೆಲೆ ಸುಮಾರು ವರ್ಷಗಳಿಂದಲೂ ಅವರು ಅವ್ಯವಹಾರ ನಡೆಸುತ್ತಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಆರೋಪಿಸಲಾಗುತ್ತಿದೆ.

























