ಪುತ್ತೂರು: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯಂಗ್ ಬ್ರಿಗೇಡ್ ಸೇವಾದಳದ ವತಿಯಿಂದ ಪುತ್ತೂರು ಬೈಪಾಸ್ ರಸ್ತೆಯ ರಾಹ ಕನ್ಸ್ಟ್ರಕ್ಷನ್ ಬಿಲ್ಡಿಂಗ್ ನ ಎದುರು ’75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ರಕ್ಷಾಬಂಧನ’ ಕಾರ್ಯಕ್ರಮ ನಡೆಯಿತು.

ಪುತ್ತೂರು ಯಂಗ್ ಬ್ರಿಗೇಡ್ ನ ಅಧ್ಯಕ್ಷ ರಂಜಿತ್ ಬಂಗೇರ ರವರು ಧ್ವಜಾರೋಹಣ ಗೈದರು, ಕಾರ್ಯಕ್ರಮದಲ್ಲಿ ಬಾಗವಹಿಸಿದ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಮಾತನಾಡಿ, ನಾವು ಕಲಿತ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಹಾಗೂ ಹುತಾತ್ಮರಾದ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದಿದ್ದು, ಆದರೆ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನೈಜ ಹೋರಾಟಗಾರರ ಹೆಸರನ್ನು ಬಿಟ್ಟು ಯಾರ್ಯಾರದು ಹೆಸರು ಕೇಳಿ ಬರುತ್ತಿದೆ, ಈ ರೀತಿ ಇತಿಹಾಸವನ್ನು ತಿರಿಚುವುದು ದೇಶ ದ್ರೋಹದ ಕೆಲಸವಾಗಿರುತ್ತದೆ, ಸತ್ಯ ಯಾವತ್ತೂ ಸತ್ಯವೇ ಸುಳ್ಳುಗಳಿಗೆ ಹೆಚ್ಚಿನ ಆಯುಷ್ಯವಿಲ್ಲ ಎಂದ ಅವರು ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಈ ದೇಶದ ಅಭಿವೃದ್ಧಿಗೆ ಹಾಕಿದ ಅಡಿಪಾಯವೇ ಭಾರತ ದೇಶ ಇಷ್ಟು ಅಭಿವೃದ್ಧಿಯಾಗಲು ಕಾರಣವಾಗಿರುತ್ತದೆ. ಯಂಗ್ ಬ್ರಿಗೇಡ್ ಸೇವಾದಳದವರು ಸ್ವಾತಂತ್ರ್ಯ ಸಂಭ್ರಮದೊಂದಿಗೆ ಸಹೋದರತೆಯನ್ನು ಸಾರುವ ರಕ್ಷಾ ಬಂಧನದಂತಹ ಕಾರ್ಯಕ್ರಮ ಹಾಕಿ ಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಬ್ಲಾಕ್ ಉಪಾಧ್ಯಕ್ಷ ಮಹಾಬಲ ರೈ ಒಳತಡ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರದಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶುಕೂರು ಹಾಜಿ, ಕಾಂಗ್ರೆಸ್ ಹಿಂದುಳಿದ ವರ್ಗದ ಪ್ರದಾನ ಕಾರ್ಯದರ್ಶಿ ಕಲಾವಿದ ಕೃಷ್ಣಪ್ಪ, ಯಂಗ್ ಬ್ರಿಗೇಡ್ ನ ರಾಜ್ಯ ಪ್ರದಾನ ಕಾರ್ಯದರ್ಶಿ ಹಾಗೂ ನಗರ ಸಭಾ ಸದಸ್ಯ ರಿಯಾಜ್ ಪರ್ಲಡ್ಕ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು,

ಸಭೆಯಲ್ಲಿ ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಅಸ್ಮಾ ಗಟ್ಟಮನೆ, ಕಾರ್ಯದರ್ಶಿ ವಿಜಯಲಕ್ಸ್ಮಿ ಕೆ ಪುತ್ತೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ನಗರ ಸಭೆಯ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಯಾಕೂಬ್ ಮುಲಾರ್, ಬ್ಲಾಕ್ ಕಾರ್ಯದರ್ಶಿ ರೋಷನ್ ರೈ ಬನ್ನೂರು, ವಿಶಾಲಾಕ್ಷಿ ಬನ್ನೂರು, ನಗರ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ಶರತ್ ಕೇಪುಲು, ರಶೀದ್ ಮುರ, ವಿಕ್ಟರ್ ಪಾಯ್ಸ್, ಕಾರ್ಯದರ್ಶಿ ಅಲಿ ಪರ್ಲಡ್ಕ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ಬ್ಲಾಕ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮು0ಜೆ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ಏಲ್ನಾಡ್ ಗುತ್ತು, ಮುಂಡೂರು ವಲಯ ಅಧ್ಯಕ್ಷ ಸುಪ್ರೀತ್ ಕಣ್ಣರಾಯ,ಯಂಗ್ ಬ್ರಿಗೇಡ್ ನ ಉನೈಸ್ ಗಡಿಯಾರ್,ಸಿನಾನ್ ಪರ್ಲಡ್ಕ, ಸನತ್ ರೈ ಒಳತಡ್ಕ,ಪ್ರಹ್ಲಾದ್ ಬೆಳ್ಳಿಪ್ಪಾಡಿ,ಖಳಂದರ್ ಪರ್ಲಡ್ಕ,ವಿನ್ಯಾಸ್ವಿಶಾಕ್, ಬಲ್ನಾಡ್ ಉಳಾಲ್ತಿ ದೈವಸ್ಥಾನದ ಮಾಜಿ ಆಡಳಿತ ಮುಕ್ತೇಸರ ತಿಮ್ಮಪ್ಪ ಗೌಡ,ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸನದ್ ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು.

ಯಂಗ್ ಬ್ರಿಗೇಡ್ ನ ಶರೀಫ್ ಬಲ್ನಾಡ್ ಸ್ವಾಗತಿಸಿದರು, ಬ್ಲಾಕ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಧನ್ಯವಾದ ಸಮರ್ಪಿಸಿದರು. ನಗರ ಸಭಾ ಸದಸ್ಯ, ಯಂಗ್ ಬ್ರಿಗೇಡ್ ನ ಆಶಿಕ್ ಹಾಗೂ ಸಾಮಾಜಿಕ ಜಾಲತಾನದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.


























