ಬೆಳ್ತಂಗಡಿ: ಹಿಂದೂ ಜಾಗರಣ ವೇದಿಕೆ ಸುರ್ಯ ಘಟಕದ ವತಿಯಿಂದ ಸುರ್ಯ-ಉಜಿರೆ ಜಂಕ್ಷನ್ನಲ್ಲಿ ನೂತನ ಬಿಪಿನ್ ರಾವತ್ ವೃತ್ತ ಹಾಗೂ ಭಗವಾಧ್ವಜ ಸ್ತಂಭ ರಚಿಸಲಾಗಿದ್ದು, ಇದರ ಉದ್ಘಾಟನೆ ಹಾಗೂ ಭಾರತ್ ಮಾತಾ ಪೂಜನ ಕಾರ್ಯಕ್ರಮವು ಆ.14 ರಂದು ಜರುಗಿತು.
ಉದ್ಘಾಟನಾ ಕಾರ್ಯಕ್ರಮವನ್ನು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ್ ಜಗದೀಶ್ ನೆತ್ತರಕೆರೆ ಹಾಗೂ ಹಿರಿಯ ನಾಗರಿಕರಾದ ತಿಮ್ಮಯ್ಯ ನಾಯ್ಕ ಮಲೆಯಡ್ಕ ರವರು ನೆರವೇರಿಸಿದರು.

ಶಿವಪ್ರಸಾದ್ ಸುರ್ಯ, ವ್ಯವಸ್ಥಾ ಪ್ರಮುಖ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಜಿರೆ ರವರು ಬೌದ್ಧಿಕ್ ನೀಡಿದರು. ಕಾರ್ಯಕ್ರಮದಲ್ಲಿ ಹಿಂ.ಜಾ.ವೇ ಸುರ್ಯ ಘಟಕದ ಅಧ್ಯಕ್ಷರಾದ ಶ್ರವಣ್ ಸುರ್ಯ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ಯಶೋಧರ ಬೆಳಾಲ್ ತಾಲೂಕ್ ಸಂಯೋಜಕ್ ಹಿಂ.ಜಾ.ವೇ, ಸಚಿನ್ ಕೊಕ್ಕಡ ತಾಲೂಕ್ ಸಹ ಸಂಯೋಜಕ್ ಹಿಂ.ಜಾ.ವೇ, ರೂಪೇಶ್ ಶಿಶಿಲ ಜಿಲ್ಲಾ ಸದಸ್ಯರು ಹಿಂ.ಜಾ.ವೇ, ಸಂತೋಷ್ ಅತ್ತಾಜೆ, ಸಂಚಾಲಕರು ಬಜರಂಗದಳ ಬೆಳ್ತಂಗಡಿ ಪ್ರಖಂಡ, ಪದ್ಮನಾಭ ಶೆಟ್ಟಿಗಾರ್ ಪದ್ಮಶ್ರೀ ಎಂಟರ್ಪ್ರೈಸಸ್ ಉಜಿರೆ, ಬಾಲಕೃಷ್ಣ ಶೆಟ್ಟಿ ಉಜಿರೆ, ನಡ ಗ್ರಾ.ಪಂ.ಅಧ್ಯಕ್ಷರಾದ ಎ ವಿಜಯ ಗೌಡ, ಸದಸ್ಯರಾದ ಸುಕೇಶ್ ನೂಚಿಲ, ಸುಮಿತ್ರಾ, ಉಜಿರೆ ಗ್ರಾ.ಪಂ. ಸದಸ್ಯರಾದ ಸದಾಶಿವ ಮಲೆಯಡ್ಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಭವ್ಯ ಹಾಗೂ ನಿರೀಕ್ಷಾ ಪ್ರಾರ್ಥಿಸಿ, ಪದ್ಮನಾಭ ಗೌಡ ಕುದುರು ಸ್ವಾಗತಿಸಿ, ರಮೇಶ್ ಬಂಗೇರ ಧನ್ಯವಾದಗೈದರು.


























