ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದ.20 ರಿಂದ 25ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಅ.5 ರಂದು ನಡೆಯಿತು.

ಕೋಡಿಂಬಾಡಿ, ಬೆಳ್ಳಿಪ್ಪಾಡಿ ಮತ್ತು ನೆಕ್ಕಿಲಾಡಿ ಗ್ರಾಮಗಳ ತ್ರಿವೇಣಿ ಸಂಗಮ ಸ್ಥಳವಾಗಿರುವ ಶಾಂತಿನಗರ ಮಹಾವಿಷ್ಣು ದೇವಸ್ಥಾನದಲ್ಲಿ ವಿಜಯದಶಮಿಯ ಸಂಭ್ರಮದೊಂದಿಗೆ ನಡೆದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರ ಯು.ಜಿ.ರಾಧಾ, ಮೊಕ್ತೇಸರರಾದ ಗಣಪತಿ ಭಟ್ ಪರನೀರು, ಪುರುಷೋತ್ತಮ ಪ್ರಭು ಹನಂಗೂರು, ರಮೇಶ್ ಗೌಡ ಬೇರಿಕೆ, ರಾಜೇಶ್ ಶಾಂತಿನಗರ, ದಿವಾಕರ ಶೆಟ್ಟಿ ಕಾರ್ನೋಜಿ, ಅರ್ಚಕ ನಾಗರಾಜ ಭಟ್ ಕುಕ್ಕಿಲ, ನೆಕ್ಕಿಲಾಡಿ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಎನ್, ಉಪಾಧ್ಯಕ್ಷೆ ಸಪ್ನಾ ಜೀವನ್ ಶಾಂತಿನಗರ, ಸದಸ್ಯ ವಿಜಯ ಕುಮಾರ್ ನೆಕ್ಕಿಲಾಡಿ, ಪ್ರಮುಖರಾದ ಮೋನಪ್ಪ ಗೌಡ ಪಮ್ಮಮಜಲು, ಸುದೇಶ್ ಶೆಟ್ಟಿ ಶಾಂತಿನಗರ, ವಸಂತ ಗೌಡ ಪನಿತೋಟ, ನಾರಾಯಣ ರಾವ್ ಬೇರಿಕೆ, ಪ್ರೀತಂ ಶೆಟ್ಟಿ ಬಿ.ಕೆ, ಭರತ್ ಕುಮಾರ್, ಸಂದೀಪ್ ಕೆ.ಪೂಜಾರಿ, ಮಹೇಶ್ ಕುಮಾರ್, ಉಪೇಂದ್ರ ಆಚಾರ್ಯ, ಚಂದ್ರಶೇಖರ ಗೌಡ ಪನಿತೋಟ, ಆನಂದ ಗೌಡ ಕೊಳಕ್ಕೆ, ಸುರೇಶ್ ಎಂ.ಕೆ., ಶೇಖರ ಪೂಜಾರಿ ಕಾಂತಳಿಕೆ, ಗಣೇಶ್ ನಾಯಕ್ ದರ್ಬೆ ಮತ್ತಿತರರು ಉಪಸ್ಥಿತರಿದ್ದರು.

























