ಪುತ್ತೂರು: ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ ಇದರ ವತಿಯಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ರವರ ಕನಸು 2025ಕ್ಕೆ ಕ್ಷಯ ರೋಗ (ಟಿಬಿ) ಮುಕ್ತ ಭಾರತ ಇದರ ಸಲುವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ತಿಂಗಳಾಡಿಯಲ್ಲಿ ಇಬ್ಬರು ಕ್ಷಯ ರೋಗಿಗಳಿಗೆ ಮುಂದಿನ 5 ತಿಂಗಳ ಕಾಲ ಪೌಷ್ಟಿಕ ಆಹಾರವನ್ನು ನೀಡಲಿದ್ದು, ಇಂದು ಒಂದು ತಿಂಗಳ ಪೌಷ್ಟಿಕ ಆಹಾರ ನೀಡಲಾಯಿತು.

ಕ್ಲಬ್ ನ ಅಧ್ಯಕ್ಷ ಸತೀಶ್ ರೈ ಮಿತ್ತೋಡಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಅತಿಥಿಗಳಾಗಿ ಆಗಮಿಸಿದ ಭವ್ಯ ರವರು ಮಾತನಾಡಿ, ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಸಹಾಯಕಿ ವಿದ್ಯಾ ರವರು ಮಾತನಾಡಿ, ಸುತ್ತಮುತ್ತಲಿನ 4 ಗ್ರಾಮದಲ್ಲಿ ಒಟ್ಟು 9 ಜನ ಕ್ಷಯ ರೋಗಿಗಳಿದ್ದು, ಅತೀ ಬಡತನದಲ್ಲಿದ್ದ 2 ರೋಗಿಗಳಿಗೆ 5 ತಿಂಗಳಿಗೆ ಬೇಕಾದ ಪೌಷ್ಟಿಕ ಆಹಾರ ಒದಗಿಸಿದ ಸ್ಪೋರ್ಟ್ಸ್ ಕ್ಲಬ್ ನ ಎಲ್ಲರಿಗು ಅಭಿನಂದನೆ ಸಲ್ಲಿಸಿದರು. ಸ್ಪೋರ್ಟ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ರವಿಕುಮಾರ್ ರೈ ಪ್ರಾಸ್ತವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕ್ಲಬ್ ನ ಪದಾಧಿಕಾರಿಗಳು, ನಿಶಾಂತ್ ರೈ, ಶರತ್ ಗುತ್ತು, ಗಣೇಶ್ ರೈ, ಸುಭಾಸ್ ರೈ , ವರುಣ್ ಗಾಂಧಿನಗರ ಹಾಗೂ ಅರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಮತ್ತು ಆಶಾಕಾರ್ಯಕರ್ತೆಯರು, ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಲೋಹಿತ್ ಗುತ್ತು ವಂದನಾರ್ಪಣೆಗೈದರು.



























