ಪಂಚೋಡಿ: ಶ್ರೀ ರಾಮ್ ಫ್ರೆಂಡ್ಸ್ ಪಂಚೋಡಿ ಇದರ ಆಶ್ರಯದಲ್ಲಿ ನಡೆದ 2 ದಿನದ ಕ್ರಿಕೆಟ್ ಪಂದ್ಯಾಟ ಪಂಚೋಡಿಯಲ್ಲಿ ನಡೆಯಿತು . ಪ್ರತಿ ಬಾರಿ ಕ್ರಿಕೆಟ್ ಪಂದ್ಯಾಟ ನಡೆಸಿದಾಗಲೂ ಒಂದು ಉದ್ದೇಶವನ್ನಿಟ್ಟುಕೊಂಡು ಅದರಿಂದ ಬಂದ ಉಳಿತಾಯವನ್ನು ಅಶಕ್ತ ಕುಟುಂಬಗಳಿಗೆ ನೀಡಿ ಈ ಸಂಘಟನೆ ನೆರವಾಗುತ್ತಿದ್ದಾರೆ.
ಯಾವುದೇ ಸ್ವಲಾಭ ಬಯಸದೆ ತಮ್ಮಿಂದಾದ ಸಹಾಯವನ್ನು ಸಮಾಜಕ್ಕೆ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಅದೇ ರೀತಿ ಈ ಬಾರಿಯು ಕ್ರೀಡಾಭಿಮಾನಿಗಳ ಹಾಗೂ ಊರವರ ಸಹಕಾರದೊಂದಿಗೆ ಒಂದು ಒಳ್ಳೆಯ ಕಾರ್ಯಕ್ಕೆ ಬೇಕಾಗಿ 2 ದಿನದ ಕ್ರಿಕೆಟ್ ಪಂದ್ಯಾಟ ನಡೆಸಿ ಯಶಸ್ವಿಯಾಗಿ ನಡೆದಿದೆ.
ಇತ್ತೀಚೆಗೆ ನಡೆದ ಅಪಘಾತದಲ್ಲಿ ಮೃತಪಟ್ಟ ನಮ್ಮೆಲ್ಲರ ಸಂಘಟನಾ ಮಿತ್ರ ದೇವಿಪ್ರಸಾದ್ ಶೆಟ್ಟಿ ಇವರ ಕನಸಿನ ಮನೆಯನ್ನು ಮನೆಯ ಮಗನ ಸ್ಥಾನದಲ್ಲಿ ಹಿಂದು ಜಾಗರಣ ವೇದಿಕೆ ನಿಂತು ಮನೆ ನಿರ್ಮಿಸಿಕೊಡುವ ಯೋಜನೆಯನ್ನು ಹಮ್ಮಿಕೊಂಡಿದೆ.

ಈ ಕಾರ್ಯಕ್ಕೆ ಸಹಾಯವಾಗಿ ಶ್ರೀರಾಮ್ ಫ್ರೆಂಡ್ಸ್ ಪಂಚೋಡಿ ರುಪಾಯಿ 50000ವನ್ನು ಹಿಂದು ಜಾಗರಣ ವೇದಿಕೆ ಗೆ ಹಸ್ತಾಂತರಿಸಿದರು.
ಜೊತೆಗೆ ಇದೇ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ಆಡುತ್ತಿದ್ದ ಮೋಹನ ( ಅಚ್ಚು ) ಇವರು ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇವರಿಗೆ ಕೂಡ ಚಿಕಿತ್ಸೆಗಾಗಿ ರುಪಾಯಿ 10000 ವನ್ನು ನೀಡದರು.

























