ಮಂಗಳೂರು: ಮಳಲಿ ಮಸೀದಿ ಕಮಿಟಿಯ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿರುವುದು ಹಿಂದೂಗಳಿಗೆ ಸಂದ ಜಯ ಎಂದು ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿ ದೇವಸ್ಥಾನದ ಮಾದರಿ ಇದ್ದ ಕಾರಣಕ್ಕೆ ನವೀಕರಣಕ್ಕೆ ತಡೆ ತಂದಿದ್ದೆವು. 800 ವರ್ಷಗಳ ಹಿಂದಿನ ದೇವಸ್ಥಾನ, ಪುರಾತತ್ವ ಇಲಾಖೆಯಿಂದ ಸರ್ವೆ ನಡೆಸಲು ಕೋರಿದ್ದೆವು. ಮಂಗಳೂರಿನ ಕೋರ್ಟ್ ಇಂದು ತೀರ್ಪು ನೀಡಿದ್ದು, ಮಸೀದಿ ಅರ್ಜಿಯನ್ನು ವಜಾ ಮಾಡಿದೆ. ನಮ್ಮ ಅಹವಾಲನ್ನು ಎತ್ತಿ ಹಿಡಿದಿದೆ ಎಂದರು.

ದೇವಸ್ಥಾನ ಅನ್ನುವ ವಾದಕ್ಕೆ ಪುಷ್ಟಿ ಸಿಕ್ಕಿದೆ., ನಮಗೆ ವಿಶ್ವಾಸವಿದೆ ಮುಂದಿನ ದಿನಗಳಲ್ಲಿ ಅಲ್ಲಿ ಭವ್ಯವಾದಂತಹ ಮಂದಿರ ನಿರ್ಮಾಣವಾಗುತ್ತೆ. ಅದೇ ರೀತಿ ನಮ್ಮ ಹೋರಾಟಕ್ಕೆ ಜಯ ಸಿಗುತ್ತದೆ. ಮಳಲಿ ಮಸೀದಿ ವಿಚಾರದಲ್ಲಿ ನಮಗೆ ಆರಂಭಿಕ ಗೆಲುವು ಸಿಕ್ಕಿದೆ ಎಂದು ಅವರು ಹೇಳಿದರು..