ಪುತ್ತೂರು: ಅನಾರೋಗ್ಯದಿಂದಾಗಿ ಬಾಲಕಿಯೋರ್ವಳು ಸಾವನ್ನಪ್ಪಿದ ಘಟನೆ ಬನ್ನೂರು ಗ್ರಾಮದ ಕಂಜೂರಿನಲ್ಲಿ ನಡೆದಿದೆ.
ಕಂಜೂರು ನಿವಾಸಿ ಆನಂದ ಕುಲಾಲ್ ರವರ ಪುತ್ರಿ ಕೃತಿಕಾ (13) ಮೃತ ಬಾಲಕಿ.

ಕೃತಿಕಾ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಅನಾರೋಗ್ಯದಿಂದಾಗಿ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ತಂದೆ-ತಾಯಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.