ಪುತ್ತೂರು: ಪ್ರಸಿದ್ಧ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಡಿಸೆಂಬರ್ 7 ರಂದು ಆಚರಿಸಲಾಯಿತು.

ಸಂಸ್ಥೆಯ ಚೇರ್ಮೇನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕೇಶವಪ್ರಸಾದ್ ಮುಳಿಯ ರವರು ದೀಪ ಬೆಳಗಿಸಿ ಮಾತನಾಡಿ, ಸಂಸ್ಥೆಯು ಸ್ಥಾಪಕರ ದಿನಾಚರಣೆ ಪ್ರಯುಕ್ತ ಡಿಸೆಂಬರ್ 7,8,9 ರಂದು ಗ್ರಾಹಕರು ನಮ್ಮಲ್ಲಿ ಖರೀದಿಸಿದ ಪ್ರತೀ ಗ್ರಾಂನಲ್ಲಿ ರೂ.50ನ್ನು ಸಾಮಾಜಿಕ ಉದ್ದೇಶಗಳಿಗಾಗಿ ವಿನಿಯೋಗಿಸಲಾಗಿದೆ.
78 ವರ್ಷಗಳ ಸಂಭ್ರಮದಲ್ಲಿರುವ ನಮ್ಮ ಸಂಸ್ಥೆಗೆ ಗ್ರಾಹಕರ ಸೇವೆ ಹಾಗೂ ಸಂತೃಪ್ತಿಯೇ ನಮ್ಮ ಮುಖ್ಯ ಧ್ಯೇಯ. ಇದಲ್ಲದೆ, ನಮ್ಮ ಸಂಸ್ಥೆಯಿಂದ ಹಲವಾರು ಸಾಮಾಜಿಕ ಕಾರ್ಯಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ನಮ್ಮನ್ನು ಪ್ರೋತ್ಸಾಹಿಸಿದ ಗ್ರಾಹಕರಿಗೆ ಹೃದಯಾಂತರಾಳದ ನಮನಗಳು ಎಂದರು.




























