ಪುತ್ತೂರು: ಅಕ್ರಮ ಗೋಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಆರ್ಲಪದವು ಸಮೀಪ ನಡೆದಿದೆ.

ಹಿಂದೂ ಜಾಗರಣ ವೇದಿಕೆ ಆರ್ಲಪದವು ಹಾಗೂ ವಿಟ್ಲ ತಾಲೂಕು ಇದರ ಜಂಟಿ ಕಾರ್ಯಚರಣೆಯಲ್ಲಿ ಆರ್ಲಪದವು ಸಮೀಪದ ಕೊಂದಲ್ಕಾನ ಎಂಬಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಆರೋಪಿ ಪೆರ್ಲದ ಸ್ವರ್ಗ ಎಂಬಲ್ಲಿನ ಜಗನ್ನಾಥ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈತ ಹಲವಾರು ವರ್ಷಗಳಿಂದ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಸಂಪ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ..