ಬೆಳ್ತಂಗಡಿ: ಮಿಷನ್ ಡ್ರೀಮ್ಸ್ ಸಂಸ್ಥೆಯು ಆಯೋಜಿಸುತ್ತಿರುವ ‘ಮಿಸ್ ಇಂಡಿಯಾ 2022’ ಸ್ಪರ್ಧೆಗೆ ಫೈನಲಿಸ್ಟ್ ಆಗಿ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಅಲೆಕ್ಕಿಯ ರಚನಾ ಗುಡಿಗಾರ್ ರವರು ಆಯ್ಕೆಯಾಗಿದ್ದಾರೆ.

ರಚನಾ ರವರು ಕಲ್ಮಂಜ ಅಲೆಕ್ಕಿಯ ಕೃಷ್ಣಪ್ಪ ಗುಡಿಗಾರ್ ಮತ್ತು ಗೀತಾ ಗುಡಿಗಾರ್ ದಂಪತಿಗಳ ಪುತ್ರಿಯಾಗಿದ್ದು, ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ಎಂಬ ವಿಷಯದ ಮೇಲೆ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.

ಸಕಲಕಲಾವಲ್ಲಭೆಯಾಗಿರುವ ರಚನಾ ಭಾಷಣಕಾರರಾಗಿ, ಕಾರ್ಯಕ್ರಮ ನಿರೂಪಕಿ, ಜೀವನ ಕೌಶಲ್ಯ ತರಬೇತುದಾರರಾಗಿ, ರೂಪದರ್ಶಿಯಾಗಿ ಹಾಗೂ ಹಲವಾರು ಸಂಘ ಸಂಸ್ಥೆ, ಎನ್.ಜಿ.ಒ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ…
ಫೈನಲಿಸ್ಟ್ ಆಗಿ ಆಯ್ಕೆ ಆಗಿರುವ ರಚನಾ ರವರು ಡಿ. 21ರಿಂದ 24ರ ವರೆಗೆ ಕಲ್ಕತ್ತದಲ್ಲಿ ನಡೆಯುವ ‘MISSION DREAMS MISS INDIA 2022’ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ..