ಸುಳ್ಯ: ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕಿನ ವತಿಯಿಂದ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನನ್ವಯ ಸುಳ್ಯದ ಚೆನ್ನಕೇಶವ ದೇವಸ್ಥಾನದ ಜಾತ್ರಾ ಸಂದರ್ಭ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದಾಗಿ ದೇವಾಲಯ ಆಡಳಿತ ಸಮಿತಿಗೆ ಕೆಲ ದಿನಗಳ ಹಿಂದೆ ಮನವಿ ಮೂಲಕ ವಿನಂತಿಸಿದ್ದೇವು., ಅದಾಗಿಯೂ ಆಡಳಿತ ಸಮಿತಿ ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಕಾನೂನನ್ನು ಕಡೆಗಣಿಸಿ ಹಿಂದೂಯೇತರರಿಗೂ ವ್ಯಾಪಾರಕ್ಕೆ ಮುಕ್ತ ಅವಕಾಶ ಎಂದು ನಿರ್ಣಯಿಸಿತು. ಇದು ಹಿಂದೂ ಸಮಾಜ ಮತ್ತು ಧಾರ್ಮಿಕ ದತ್ತಿ ಇಲಾಖಾ ಕಾನೂನಿಗೆ ಎಸಗಿದ ಅಪಚಾರ ಇದನ್ನು ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಖಂಡಿಸುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕಿನ ಸಂಚಾಲಕರಾದ ಮಹೇಶ್ ಉಗ್ರಣಿಮನೆ ತಿಳಿಸಿದ್ದಾರೆ.
ಈ ಹಿಂದೆ ಅನೇಕ ದೇವಸ್ಥಾನಗಳಲ್ಲಿ ಮುಕ್ತ ಅವಕಾಶ ನೀಡಿ ಕಾನೂನು ಸುವ್ಯವಸ್ಥೆಗೂ ಧಕ್ಕೆ ಬಂದಿರುವುದರಿಂದ ಜಾತ್ರಾ ಸಂದರ್ಭದಲ್ಲಿ ಹಿಂದೂ ಸಮಾಜದಲ್ಲಿ ಈ ರೀತಿಯ ಯಾವುದೇ ಗೊಂದಲಗಳು ಮೂಡದ ರೀತಿ ಮತ್ತೊಮ್ಮೆ ಆಡಳಿತ ಸಮಿತಿ ನಿರ್ಣಯವನ್ನು ಬದಲಿಸುವುದಕ್ಕಾಗಿ ತಾಲೂಕಿನ ಎಲ್ಲಾ ಹಿಂದೂ ಸಮಾಜದ ಹಿರಿಯರು, ಕಾರ್ಯಕರ್ತರು ಒಟ್ಟು ಸೇರಿ ಹಿಂದೂ ಹಿತ ರಕ್ಷಣಾ ಸಮಿತಿಯ ಮುಖಾಂತರ ಸಂಬಂಧಪಟ್ಟ ಆಡಳಿತ ಸಮಿತಿಗೆ ಮತ್ತು ಇಲಾಖಾ ಅಧಿಕಾರಿಗಳಿಗೆ ಮತ್ತೊಮ್ಮೆ ಮನವಿಯನ್ನು ಸಲ್ಲಿಸಿದ್ದೇವೆ.
ಹಿಂದೂ ಸಮಾಜದ ಆರಾಧನಾ ಕೇಂದ್ರ ಸುಳ್ಯ ಚೆನ್ನಕೇಶವ ದೇವಸ್ಥಾನದ ಸುತ್ತ ಅನ್ಯಮತೀಯರಿಗೆ ಯಾವುದೇ ರೀತಿಯ ವ್ಯಾಪಾರಕ್ಕೆ ಅವಕಾಶ ನೀಡಬಾರದು ಒಂದು ವೇಳೆ ಇದೇ ರೀತಿ ಧಾರ್ಮಿಕ ದತ್ತಿ ಇಲಾಖೆಯ ಕಾನೂನು ಮೀರಿ ಅವಕಾಶ ನೀಡಿದರೆ ಮುಂದೆ ಆಗುವ ಎಲ್ಲಾ ಗೊಂದಲಗಳಿಗೆ ದೇವಸ್ಥಾನದ ಆಡಳಿತ ಸಮಿತಿ ಹೊಣೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ..


























