ಕನ್ನಡದಲ್ಲಿ ವಿಭಿನ್ನ ಕಥಾ ಹಂದರವಿರುವ ಇಂದಿನ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ‘ಮಿಡಿತ’ ಎಂಬ ಕನ್ನಡ ಕಿರುಚಿತ್ರದ ಮುಹೂರ್ತ ಶ್ರೀಗುರು ರಾಘವೇಂದ್ರ ಮಠದಲ್ಲಿ ನಡೆಯಿತು.
ಪ್ರಧಾನ ಅರ್ಚಕರಾದ ರಾಘವೇಂದ್ರ ಉಡುಪ ರವರು ಪೂಜೆ ನೆರವೇರಿಸಿದರು. ಈ ಚಿತ್ರದ ಚಿತ್ರೀಕರಣವು ಪುತ್ತೂರಿನ ಆಸುಪಾಸು ಹಾಗೂ ಉದ್ಯಮಿ ಪ್ರಸಾದ್ ಇಂಡಸ್ಟ್ರಿಯ ಶಿವಪ್ರಸಾದ್ ಶೆಟ್ಟಿ ರವರ ಮನೆಯಲ್ಲಿ ನಡೆಯಿತು .

ಚಲನಚಿತ್ರ ನಟ, ಪ್ರಕಾಶ್ ತುಮಿನಾಡು ಇವರ ಸಲಹೆ ಸಹಕಾರದೊಂದಿಗೆ ಅವರ ಮಗ ಖುಷಿತ್ ತುಮಿನಾಡು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುತ್ತಾರೆ.
ಈ ಚಿತ್ರದಲ್ಲಿ ಇನ್ಸ್ಪೈರ್ (Inspire) ಫಿಲ್ಮ್ಸ್ ತಂಡದ ಅಜ್ಜನ ಮಾಯೆ ಖ್ಯಾತಿಯ ರವಿಚಂದ್ರ ರೈ ಮುಂಡೂರು ಇವರ ಕಥೆ- ಚಿತ್ರಕಥೆ- ನಿರ್ದೇಶನ ಹಾಗೂ ಸೂರಜ್ ಪಂಜಳ ರವರ ಕ್ಯಾಮರಾ ವರ್ಕ್, ಪ್ರಜ್ವಲ್ ರವರ ಡ್ರೋನ್ ಕ್ಯಾಮರಾ, ರವಿ ಸಿಂಗೇರಿ ರವರ ಪ್ರಸಾದನವಿರುತ್ತದೆ.

ಈ ಸಂದರ್ಭದಲ್ಲಿ ಹೆಸರಾಂತ ಚಲನಚಿತ್ರ ನಟ ಪ್ರಕಾಶ್ ತುಮಿನಾಡು ,ಉದ್ಯಮಿ ಶಿವಪ್ರಸಾದ್ ಶೆಟ್ಟಿ ,ಸುಜಾತ ಶಿವಪ್ರಸಾದ್ ಶೆಟ್ಟಿ, ಕುತೂಹಲ ಕಲರವ ವಿಜಯ್ ಅತ್ತಾಜೆ, ರಮಿತಾ ಶೈಲೇಂದ್ರ ಕಾರ್ಕಳ, ಶ್ರೀ ಮಾಧವ ಪ್ರಭು, ಬಾಲಕೃಷ್ಣ ರೈ ಬೈಲಾಡಿ ,ಡಿ ಕೆ ಶೇಷಪ್ಪ ಪೂಜಾರಿ, ಉಮೇಶ್ ಎಸ್ ಕೆ, ಪ್ರವೀಣ್ ಮುಲಾರ್ ,ವೆಂಕಪ್ಪ ಬರೆಪ್ಪಾಡಿ ,ಸುಶಾಂತ್ ಮರೀಲ್, ಜಗದೀಶ್ ಶೆಟ್ಟಿ, ರಿತೇಶ್ ಕೆಮ್ಮಾಯಿ ,ಹರೀಶ್ ಆಲಂಗಾಜೆ, ಅನುಪ್ತ ಶೆಟ್ಟಿ, ಪ್ರತೀಕ್ ತುಮಿನಾಡು, ಗುರುರಾಜ್ ಕೆಮ್ಮಿಂಜೆ ಉಪಸ್ಥಿತರಿದ್ದರು.
ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಅತಿ ಶೀಘ್ರವಾಗಿ ಕಿರುಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ..





























