ನಾಗರಹಾವು ಕಡಿದ ತಕ್ಷಣ ವಿಷ ರಕ್ತದಲ್ಲಿ ಪಸರಿಸುತ್ತದೆ. ಬಾಯಿಯಿಂದ ರಕ್ತ ಹೀರಿದಲ್ಲಿ ಕೇವಲ ಶೇ.10 ರಷ್ಟು ಕೂಡ ವಿಷವನ್ನು ಹೊರತೆಗೆಯಲು ಸಾಧ್ಯವಿಲ್ಲ. ಹಾವು ಕಡಿತವಾದ ತಕ್ಷಣವೇ ಹಾವನ್ನು ಗುರುತಿಸಿ, ಕಡಿತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಬೇಕು. ನಾಗರ ಹಾವಿನಂತಹ ವಿಷಪೂರಿತ ಹಾವು ಕಡಿತಕ್ಕೊಳಗಾದ ವೇಳೆ ಬಾಯಿಯಿಂದ ವಿಷ ಹೀರುವ ಪ್ರಕ್ರಿಯೆಗೆ ಯಾರೂ ಮುಂದಾಗಬಾರದು ಎಂದು ಉರಗತಜ್ಞ ತೇಜಸ್ ಸಲಹೆ ನೀಡಿದ್ದಾರೆ.
ಹಾವು ಕಡಿತಕ್ಕೊಳಗಾದ ಮಹಿಳೆಯೋರ್ವರ ವಿಷವನ್ನು ಇನ್ನೊಬ್ಬರು ಹೀರಿ ತೆಗೆದ ವಿಚಾರವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿರುವ ಗೊಂದಲ ಪರಿಹಾರಕ್ಕಾಗಿ ಅವರು ಸಲಹೆಗಳನ್ನು ನೀಡಿದರು.
ಈ ವಿಚಾರ ಸ್ವಲ್ಪ ಜನರಲ್ಲಿ ಗೊಂದಲ ಮೂಡಿಸುವ ವಿಚಾರವಾಗಿದೆ. ಯಾಕೇಂದರೆ ಕೆಲವರು ಈ ವಿಚಾರ ಹೌದಾ..!!? ಇದು ಸಾಧ್ಯವಾ..!! ಎಂದುಕೊಳ್ಳುತ್ತಾರೆ.
ಇದು ಖಂಡಿತಾ ಸಾಧ್ಯವಿಲ್ಲ. ಯಾವುದೇ ಹಾವು ಕಚ್ಚಿದರೆ ಅದರ ವಿಷ ನಮ್ಮ ರಕ್ತಕ್ಕೆ ಸೇರಿಕೊಂಡರೆ ರಕ್ತ ಸಂಚಾರ ಆಗುತ್ತಾನೆ ಇರುತ್ತದೆ. ಅದನ್ನು ನಾವು ಬಾಯಿಯಿಂದ ಹೀರಿದರೆ 100% ಅದು ಹೊರಗೆ ಬರುವುದಿಲ್ಲ. ಕಾರಣವೇನೆಂದರೆ ರಕ್ತ ಸಂಚಾರವಾಗುತ್ತಿರುತ್ತದೆ. ಇದು ಸೂಕ್ತ ವಿಧಾನವಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಇತ್ತೀಚಿಗೆ ಕಡಿತಕ್ಕೊಳಗಾಗಿದ್ದವರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಅವರಿಗೆ ಕಡಿದಿರುವುದು ‘ಮಲಬಾರ್ ಪಿಟ್ ವೈಪರ್’ ಹಾವು ಎಂದು ಮಾಹಿತಿ ನೀಡಿದ್ದಾರೆ. ಈ ಹಾವು ಅತ್ಯಂತ ಕಡಿಮೆ ಪ್ರಮಾಣದ ವಿಷದ ಹಾವಾಗಿದ್ದು, ಈ ಹಾವು ಕಡಿತದಿಂದ ಜೀವ ಹಾನಿ ಸಂಭವಿಸುವುದು ಅಪರೂಪ ಎಂದು ಉರಗತಜ್ಞ ತೇಜಸ್ ಹೇಳಿದ್ದಾರೆ.
ಹಾವು ಕಚ್ಚಿದರೆ ಈ ರೀತಿಯಾಗಿ ಬಾಯಿಯಿಂದ ವಿಷ ತೆಗೆಯುವ ಪ್ರಯತ್ನ ಮಾಡಬೇಡಿ ಅದು ಅಪಾಯಕಾರಿ.., ಮೊದಲು ಕಚ್ಚಿದ ಹಾವನ್ನು ಗುರುತಿಸಿ, ತಕ್ಷಣ ಕಡಿತಕ್ಕೊಳಗಾದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಬೇಕು ಎಂದಿದ್ದಾರೆ..

























