ವಿಟ್ಲ: ಕೆಲಸದಾಳು ಅಂಗಡಿ ಮಾಲಕನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ನಡೆಸಿದ ಪ್ರಕರಣ ವಿಟ್ಲ ರಂಗರಮಜಲು ಎಂಬಲ್ಲಿ ನಡೆದಿದ್ದು,ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮನು (ಮನೋಹರ) ಬಂಧಿತ ಆರೋಪಿ.

ಜ.20 ರಿಂದ ಮಾ.20 ರ ವರೆಗೆ ಎರಡು ತಿಂಗಳ ಕಾಲವಿಟ್ಲ ರಂಗರಮಜಲು ಮುರಳಿಧರಎಂಬವರ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿಯು ಒಟ್ಟು3.20,000 ಮೌಲ್ಯದ ಒಟ್ಟು 64 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನಗೈದಿದ್ದ.
ಈ ಕುರಿತು ಮುರಳಿಧರ ರವರು ಠಾಣೆಗೆ ದೂರು ನೀಡಿದ್ದು, ವಿಟ್ಲ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.




























