ಕುಂಬಳೆ : ಸಮುದ್ರಕ್ಕೆ ಈಜಲೆಂದು ಹೋದ ಮೂವರು ನೀರು ಪಾಲಾಗಿ ದುರ್ಮರಣಕ್ಕೀಡಾದ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ. ಪುತ್ತೂರು ತಾಲೂಕಿನ ನೆಕ್ಕರೆ ಪುಟ್ಟಣ್ಣ ಎಂಬವರ ಪುತ್ರ ಸುಮಾರು 17 ವರ್ಷ ಪ್ರಾಯದ ನಿರಂಜನ್ , ನೆಲ್ಲೂರು ಕೆಮ್ರಾಜೆ ಗ್ರಾಮದ ಎರ್ಮೆಟ್ಟಿ ಬೈರಪ್ಪ ಎಂಬವರ ಪುತ್ರರಾದ 18 ವರ್ಷ ಪ್ರಾಯದ ಕಾರ್ತಿಕ್ ಮತ್ತು 19 ವರ್ಷ ಪ್ರಾಯದ ಕೀರ್ತನ್ ಎಂಬವರು ಕಾಸರಗೋಡಿನ ಕುಂಬಳೆಯ ತನ್ನ ಸಂಬಂಧಿಕರ ಮದುವೆಗೆಂದು ಹೋಗಿದ್ದರು. ಮದುವೆ ಕಾರ್ಯ ಮುಗಿಸಿ ನಿನ್ನೆ ಸಂಜೆ ವೇಳೆಗೆ ಈ ಮೂವರು ಕುಂಬಳೆ ಬಳಿ ಸಮುದ್ರಕ್ಕೆ ಸ್ನಾನಕ್ಕೆಂದು ಹೋಗಿದ್ದರು. ಈ ವೇಳೆ ಮೂವರೂ ನೀರು ಪಾಲಾಗಿದ್ದಾರೆಂದು ತಿಳಿದು ಬಂದಿದೆ. ಅಲ್ಲಿಯ ಮೀನುಗಾರರಿಗೆ ವಿಷಯ ತಿಳಿದು ಅವರು ಮೃತದೇಹವನ್ನು ಸಮುದ್ರದಿಂದ ತೆಗೆದರೆನ್ನಲಾಗಿದೆ. ಮೃತದೇಹವನ್ನು ಇಂದು ಊರಿಗೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ.


