ಕಾನೂನಿನ ಚೌಕಟ್ಟಿನಡಿ ರಚನೆಯಾಗಿ ಸೇವಾ-ಸುರಕ್ಷಾ-ಸಂಸ್ಕಾರ ಎನ್ನುವ ಧ್ಯೇಯವನ್ನಿಟ್ಟುಕೊಂಡು ಸಮಾಜದ ಕೆಲಸ ಮಾಡುತ್ತಿರುವ ಭಜರಂಗದಳವನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ
ಹೇಳಿಕೊಂಡಿರುವುದನ್ನು ಹಿಂದು ಜಾಗರಣ ವೇದಿಕೆ ಖಂಡಿಸಿದೆ.
ಭಜರಂಗದಳ ಸೇರಿ ಹಿಂದುಪರ ಸಂಘಟನೆಗಳು ಸಾಮಾಜಿಕ ಜಾಗೃತಿ, ಹಿಂದು ಧಾರ್ಮಿಕ ಕೇಂದ್ರಗಳ ರಕ್ಷಣೆ, ಗೋರಕ್ಷಣೆ, ಪ್ರಾಕೃತಿಕ ವಿಕೋಪ ಮತ್ತು ಕರೋನಾ ಮಹಾಮಾರಿ.., ಸೇರಿದಂತೆ ಬೇರೆ ಬೇರೆ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಸೇವಾ
ಕಾರ್ಯಗಳನ್ನು ಮಾಡಿರುವುದನ್ನು ಇಡೀ ವಿಶ್ವವೇ ಗಮನಿಸಿದೆ. ಹಿಂದು ಸಾಮಾಜಿಕ ಸಂಘಟನೆಗಳು ರಾಷ್ಟ್ರದ ಹಿತಕ್ಕಾಗಿಯೇ
ಕಾರ್ಯನಿರ್ವಹಿಸುತ್ತವೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ನ ಸಿದ್ದರಾಮಯ್ಯ ಪಿ.ಎಫ್.ಐ ಭಯೋತ್ಪಾದಕ ಸಂಘಟನೆಯ ಮೇಲಿನ ೧೭೫ ಕ್ರಿಮಿನಲ್ ಕೇಸ್ ಗಳನ್ನು ವಾಪಸ್ ಪಡೆದು ಹಿಂದು ವಿರೋಧಿ ದುಷ್ಕೃತ್ಯಗಳನ್ನು ನಡೆಸುವವರಿಗೆ ಬೆಂಬಲ ನೀಡುವ ಮೂಲಕ ತನ್ನ ಹಿಂದು ವಿರೋಧಿ ಮಾನಸಿಕತೆಯನ್ನು ಸಮಾಜದ ಮುಂದೆ ತೆರೆದಿಟ್ಟಿದ್ದರು.
ಆದರೇ ಕೇಂದ್ರ ಸರ್ಕಾರವು ಪಿ.ಎಫ್.ಐ ಭಯೋತ್ಪಾದಕ
ಸಂಘಟನೆಯನ್ನೇ ದೇಶಾದ್ಯಂತ ನಿಷೇಧಿಸುವ ಮೂಲಕ ದೇಶದ್ರೋಹಿಗಳನ್ನು ಮಟ್ಟಹಾಕಲು ಕಠಿಣ ಕ್ರಮ ಕೈಗೊಂಡಿತು. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇಸ್ಲಾಮಿಕ ಮೂಲಭೂತವಾದಿ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷವು ಅನ್ಯಕೋಮಿನವರನ್ನು ಸಂತೋಷ ಪಡಿಸುವುದಕ್ಕಾಗಿಯೇ ಭಜರಂಗದಳ ನಿಷೇಧ ಅನ್ನುವುದನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಅನ್ಯಕೋಮಿನ ಓಲೈಕೆಗಾಗಿ ತುಷ್ಟೀಕರಣವನ್ನು ನಡೆಸುತ್ತಿದೆ. ನಿಷೇಧಿತ ಪಿ.ಎಫ್.ಐ ಹಾಗೂ ಮೂಲಭೂತವಾದಿಗಳ ನಿರ್ದೇಶನದಂತೆಯೇ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿಕೊಂಡಿರುವುದು
ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದು ಸಾಮಾಜಿಕ ಸಂಘಟನೆಯಾದ ಭಜರಂಗದಳದ ನಿಷೇಧವನ್ನು ಸೇರಿಸಿಕೊಂಡಿರುವುದು ಕಾಂಗ್ರೆಸ್ ಪಕ್ಷದ ಹಿಂದು ವಿರೋಧಿ ಮಾನಸಿಕತೆಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಹಿಂದೆಯೂ ಸಹ ಕೋಟ್ಯಾಂತರ ಹಿಂದುಗಳ ಶ್ರದ್ಧಾಕೇಂದ್ರವಾದ ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣದ ವಿರುದ್ಧವೇ ಧ್ವನಿ ಎತ್ತಿದ್ದ ಕಾಂಗ್ರೆಸ್ ಇದೀಗ ಶ್ರೀರಾಮ ಭಕ್ತರ ಸೇನೆ ಭಜರಂಗದಳದ ನಿಷೇಧ ವಿಷಯವನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿರುವುದನ್ನು ಸಮಸ್ತ ಜಾಗೃತ ಹಿಂದು ಸಮಾಜವ ಖಂಡಿಸುತ್ತದೆ. ಹಾಗೂ ತನ್ನ ಪ್ರಣಾಳಿಕೆಯಿಂದ ದೇಶಭಕ್ತರ
ಸಂಘಟನೆಯಾದ ಭಜರಂಗದಳ ನಿಷೇಧ ವಿಷಯವನ್ನು ಕೂಡಲೇ ತೆರವುಗೊಳಿಸಲು ಆಗ್ರಹಿಸುತ್ತದೆ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಸಂಚಾಲಕರಾದ ಧೋ. ಕೇಶವಮೂರ್ತಿ, ಅಯ್ಯನಗೌಡ ಹೇರೂರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























