ಬೆಂಗಳೂರು : ವೆಸ್ಟ್ ಬಂಗಾಳದ ಹೋಗುಳಿಯಲ್ಲಿ ನಡೆಯುವ ಸಬ್ ಜೂನಿಯರ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್ಶಿಪ್ ಮೇ 27ರಿಂದ ಜೂನ್ 1 ರ ತನಕ ನಡೆಯಲಿದೆ.
ಇದರ ಆಯ್ಕೆ ಪ್ರಕ್ರಿಯೆ ವಿಶ್ವಶಾಂತಿ ಶಿಕ್ಷಣ ಸಂಸ್ಥೆ ರತನ್ ಪುರಿ ಹುಣಸೂರು ಮೈಸೂರು ಜಿಲ್ಲೆಯಲ್ಲಿ ನಡೆಯಿತು 2 ದಿನಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 200ಕ್ಕೂ ಅಧಿಕ ಹುಡುಗರು 50 ಕ್ಕೊ ಹೆಚ್ಚು ಹುಡುಗಿಯರು ಭಾಗವಹಿಸಿದ್ದರು.
ಆಯ್ಕೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಚೇರ್ಮೆನ್ ಮತ್ತು ಕನ್ವೀನರ್ ಆಂಟೋನಿ ಜೋಸೆಫ್ ರಾಜ್ಯ ಎಸೋಸಿಯೇಷನ್ ಸದಸ್ಯ ಎಂ ಎಂ ಗುಡಿ ಅವರ ನೇತೃತ್ವದಲ್ಲಿ ಆಯ್ಕೆ ನಡೆಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ತರಬೇತುದಾರರಾದ ಮನೋರಂಜನ್.ಜೇ,ಮಮತಾ ಶೆಟ್ಟಿ,ತೇಜಸ್ವಿನಿ ಸಮ್ಮುಖದಲ್ಲಿ ನಡೆಯಿತು. ತಾಲೂಕು ಪಂಚಾಯಿತಿನ ಮುಖ್ಯ ಅಧಿಕಾರಿ ಲೋಕೇಶ್ ಎಚ್ .ಎಸ್. ವಿಶ್ವಶಾಂತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹಾಲಿಂಗಪ್ಪ, ದೈಹಿಕ ನಿರ್ದೇಶಕರು ಶಿವಕುಮಾರ್, ಟ್ಯಾಲೆಂಟ್ ಸ್ಕೂಲಿನ ದೈಹಿಕ ಶಿಕ್ಷಕರಾದ ಮಹಾದೇವಮೂರ್ತಿ, ಶಾಸ್ತ್ರೀಯ ಸ್ಕೂಲ್ ನ ದೈಹಿಕ ಶಿಕ್ಷಕರಾದ ಮಂಜುನಾಥ ಹೆಚ್ ಪಿ. ಜಗದೀಶ್ ದೈಹಿಕ ಶಿಕ್ಷಕರು ಶಿವಕುಮಾರ್ ದೈಹಿಕ ಶಿಕ್ಷಕರು ಅಲ್ಲದೆ ರಾಷ್ಟ್ರೀಯ ಆಟಗಾರರಾದ ಆಕಾಶ್ ಮತ್ತು ಅರುಣ್ ಉಪಸ್ಥಿತರಿದ್ದರು.

ವ್ಯವಸ್ಥಿತವಾಗಿ ಆಟಗಾರರನ್ನು ಆಯ್ಕೆ ಮಾಡಿ ತರಬೇತಿ ಶಿಬಿರಕ್ಕೆ ಸಂಭಾವ್ಯ ಪಟ್ಟಿಯನ್ನು ಬಿಡುಗಡೆ ಮಾಡಿ ಇದೇ ಸ್ಥಳದಲ್ಲಿ ಆಹಾರ ಮತ್ತು ವಸತಿ ಸೌಲಭ್ಯ ದೊಂದಿಗೆ ಅಭ್ಯಾಸ ತರಬೇತಿ ನೀಡಲಾಗುವುದು ಎಂದು ಚೇರ್ಮನ್ ಮತ್ತು ಕನ್ವೀನರಾದ ಆಂತೋನಿ ಜೋಸೆಫ್ ಅವರು ಆಯ್ಕೆಯಾದ ಆಟಗಾರರಿಗೆ ತಿಳಿಸಿದರು. ಅಂತಿಮ ಆಯ್ಕೆಯಾದ ಪಟ್ಟಿಯ ಆಟಗಾರರು ಮೇ 25ರಂದು ವೆಸ್ಟ್ ಬಂಗಾಳಕ್ಕೆ ಸಮವಸ್ತ್ರದೊಂದಿಗೆ ತೆರಳುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























