ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ದಾಸಪ್ಪ ಪೂಜಾರಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಜಗನ್ನಾಥ ಸಾಲಿಯಾನ್ ಹೆಚ್., ಉಪಾಧ್ಯಕ್ಷರಾದ ಮೋಹನ್ ಕೆ.ಎಸ್., ಮಂಡಳಿ ಸದಸ್ಯರಾದ ಹರೀಶ್ ನಾಯಕ್.ಎಂ., ಕೃಷ್ಣ ಕೆ., ದಯಾನಂದ ಆಳ್ವ, ಗೋವರ್ಧನ್ ಕುಮಾರ್ ಐ, ಸುಂದರ ಡಿ., ದಿವಾಕರ ವಿ., ಶುಭಲಕ್ಷ್ಮಿ ಹಾಗೂ ಅತಿಥಿಗಳಾಗಿ ತುಳಸಿದಾಸ್ ಶೆಣೈ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೃಷ್ಣ ಮುರಳಿ ಶ್ಯಾಮ್ ಕೆ. ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ದಾಸಪ್ಪ ಪೂಜಾರಿ ರವರನ್ನು ಬ್ಯಾಂಕಿನ ವತಿಯಿಂದ ಗೌರವಿಸಲಾಯಿತು.
ಬ್ಯಾಂಕಿನ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಹಾಸ ರಾಣ್ಯ ಡಿ. ಕಾರ್ಯಕ್ರಮ ನಿರೂಪಿಸಿದರು.