ಪುತ್ತೂರು : ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು, ಪಾಣಾಜೆ ಇದರ ಆಶ್ರಯದಲ್ಲಿ ನಡೆಯುವ 17ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ನಡೆಯಿತು.
ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದ ಅಧ್ಯಕ್ಷರಾದ ಪಿ.ಜಿ.ಶಂಕರನಾರಾಯಣ ಭಟ್ ರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಅಷ್ಟಮಿ ಆಚರಣೆಯು ಧಾರ್ಮಿಕ, ಕ್ರೀಡಾಕೂಟ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಟೆಯಲಿದೆ. ವೇದಮೂರ್ತಿ ಶ್ರೀ ಗೋಪಾಲಕೃಷ್ಣ ಅಡಿಗ ಅಪಿನಿಮೂಲೆ ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ವಿದ್ಯಾರ್ಥಿಗಳಿಗೆ,ಸಾರ್ವಜನಿಕ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ ನಡೆಯಲಿದೆ. 2 ವಿಭಾಗದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಲಿರುವುದು, ಧಾಮಿಕ ಸಭೆ, ಬಹುಮಾನ ವಿತರಣೆ, ಶಟ್ಲ್ ಬ್ಯಾಟ್ ಮಿಟನ್ ಸ್ಪರ್ಧೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾನ, ನೃತ್ಯ, ಸಂಭ್ರಮ ನಡೆಯಲಿದೆ.
ಬೆಳಗ್ಗೆ ಉಪಹಾರ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಹಾಗೂ ಸಂಜೆ ಲಘ ಉಪಹಾರ ವ್ಯವಸ್ಥೆ ಇರುತ್ತದೆ.
ಈ ಸಂದರ್ಭದಲ್ಲಿ ಯಾದವ ಸಭಾ ಪ್ರಾದೇಶಿಕ ಸಮಿತಿ ವತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರ ಭಜನ ಮಂದಿರಕ್ಕೆ 10 ಚಯರ್(ಕುರ್ಚಿ) ಹಸ್ತಾಂತರಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವದ್ಯಕ್ಷರಾದ ಸದಾಶಿವ ರೈ ಸೂರಂಬೈಲ್,ಪ್ರಗತಿಪರ ಕೃಷಿಕರಾದ ಲಕ್ಷ್ಮೀನಾರಾಯಣ ರೈ ಕೆದಂಬಾಡಿ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಬಾಬು ರೈ ಕೋಟೆ,ಉದ್ಯಮಿಗಳಾದ ವರದರಾಯ ನಾಯಕ್,ಪುತ್ತೂರು ತಾಲೂಕು ಯಾದವ ಸಭಾ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ,ಮಾಜಿ ಗ್ರಾ.ಪಂ ಅಧ್ಯಕ್ಷರಾದ ನಾರಾಯಣ ಪೂಜಾರಿ ತೂಂಬಡ್ಕ,ವಿದ್ಯಾಶ್ರೀ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷರಾದ ಚಂದ್ರ.ಎ.ಬಿ.ಸತ್ಯನಾರಾಯಣ ಮಣಿಯಾಣಿ ತಲೆಪ್ಪಾಡಿ,ರವೀಂದ್ರ ಭಂಡಾರಿ ಬೈಕ್ರೋಡ್,ಪುಷ್ಪರಾಜ್ ರೈ ಕೋಟೆ, ಭರತೇಶ್ ರಾವ್,ಪ್ರಕಾಶ್ ಕುಲಾಲ್, ಹರಿಪ್ರಸಾದ್ ಕುಲಾಲ್,ಹರೀಶ್ ಪೂಜಾರಿ ಕಡಮಾಜೆ,ಹರೀಶ್ ಜಿ.ಎಸ್ ,ಕುಂಞ್ಣ ಮಣಿಯಾಣಿ,ಗೋಪಾಲ ಮಣಿಯಾಣಿ ದೇವಸ್ಯರಾಮಚಂದ್ರ ಮಣಿಯಾಣಿ ,ಶಿವರಾಮ ಮಣಿಯಾಣಿ,ನಾರಾಯಣ ಮಣಿಯಾಣಿ ಸುಡುಕ್ಕುಳಿ, ಕಾರ್ತಿಕ್ ಡಿ.ಜಿ.,ರಾಧಾಕೃಷ್ಣ ಯಾದವ್,ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಧನಂಜಯ ಮಣಿಯಾಣಿ ಉಪಸ್ಥಿತರಿದ್ದರು. ಶ್ರೀಹರಿ ಪಾಣಾಜೆ ರವರು ಸ್ವಾಗತಿಸಿ,ಧನ್ಯವಾದ ಸಲ್ಲಿಸಿದರು.


























